ಮನೆ ಅಪರಾಧ ನಿಯಂತ್ರಣ ತಪ್ಪಿ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಕಾರು: ಮೂವರು ಬ್ಯಾಂಕ್ ಉದ್ಯೋಗಿಗಳ ಸಾವು

ನಿಯಂತ್ರಣ ತಪ್ಪಿ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಕಾರು: ಮೂವರು ಬ್ಯಾಂಕ್ ಉದ್ಯೋಗಿಗಳ ಸಾವು

0

ಉತ್ತರಪ್ರದೇಶ(ಮೊರದಾಬಾದ್):‌ ದಿಢೀರ್‌ ಎಂದು ಕೋತಿಗಳು ರಸ್ತೆಗೆ ಲಗ್ಗೆ ಇಟ್ಟ ಪರಿಣಾಮ ಕಾರು ನಿಯಂತ್ರಣ ತಪ್ಪಿ ಟ್ಯಾಂಕರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಬ್ಯಾಂಕ್‌ ಉದ್ಯೋಗಿಗಳು ಕೊನೆಯುಸಿರೆಳೆದಿರುವ ಘಟನೆ ಮೊರದಾಬಾದ್-ಅಲಿಗಢ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ(ಮೇ 13) ನಡೆದಿರುವುದಾಗಿ ವರದಿ ತಿಳಿಸಿದೆ.

Join Our Whatsapp Group

ಮೊರದಾಬಾದ್‌ ನ ಡೋಮ್‌ ಗಢ್‌ ಪ್ರದೇಶದಲ್ಲಿ ಈ ಅಪಘಾತ ಘಟನೆ ನಡೆದಿತ್ತು. ಮೃತರನ್ನು ಆಕ್ಸಿಸ್‌ ಬ್ಯಾಂಕ್‌ ಮ್ಯಾನೇಜರ್‌ ಸೌರಭ್‌ ಶ್ರೀವಾತ್ಸವ್‌, ಕ್ಯಾಶಿಯರ್‌ ದಿವ್ಯಾಂಶು ಮತು ಹಾಗೂ ಅಮಿತ್‌ ಎಂದು ಗುರುತಿಸಲಾಗಿದೆ.

ಆಕ್ಸಿಸ್‌ ಬ್ಯಾಂಕ್‌ ನ ಮೂವರು ಉದ್ಯೋಗಿಗಳು ತೆರಳುತ್ತಿದ್ದಾಗ ಕಾರು ಟ್ಯಾಂಕರ್‌ ಗೆ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅಮಿತ್‌ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಮಂಗಗಳ ಗುಂಪು ದಿಢೀರನೆ ರಸ್ತೆಗೆ ಆಗಮಿಸಿದ್ದ ಪರಿಣಾಮ ಈ ಅಪಘಾತಕ್ಕೆ ಕಾರಣ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿ ವಿವರಿಸಿದೆ.