ಮನೆ ಅಪರಾಧ 80 ಸಾವಿರ ಹಣ ಪಡೆದು ವಂಚನೆ: ಪ್ರಕರಣ ದಾಖಲು

80 ಸಾವಿರ ಹಣ ಪಡೆದು ವಂಚನೆ: ಪ್ರಕರಣ ದಾಖಲು

0

ಮೈಸೂರು: ಸಹಾಯಕ ಪ್ರಾಧ್ಯಾಪಕ ಕೆ.ಸಿ.ನಂದೀಶ್‌ ಅವರಿಗೆ ಕಡಿಮೆ ಬೆಲೆಗೆ ಕಬ್ಬಿಣ ಹಾಗೂ ಸಿಮೆಂಟ್‌ ಕೊಡಿಸುತ್ತೇನೆಂದು ನಂಬಿಸಿ ಅವರಿಂದ ₹80 ಸಾವಿರ ಹಣ ಪಡೆದು ವಂಚಿಸಿದ ಆರೋಪದಲ್ಲಿ ಚನ್ನರಾಯಪಟ್ಟಣ ನಿವಾಸಿ ನಂದ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ನಂದ ಮೇ 13ರಂದು ನಂದಿಶ್‌ ಅವರಿಗೆ ಕರೆ ಮಾಡಿ,  ನಾನು ಲ್ಯಾಂಡ್‌ ಆರ್ಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾಮಗಾರಿಗೆ ತಂದಿರುವ ಕಬ್ಬಿಣ ಹಾಗೂ ಸಿಮೆಂಟ್‌ ಅನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ನಂಬಿಸಿ, ಫೋನ್‌ ಪೇ ಮೂಲಕ ₹80 ಸಾವಿರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ನಂತರ ಆರೋಪಿ ಸಂಪರ್ಕಕ್ಕೆ ಸಿಗದಿದ್ದಾಗ ನಂದೀಶ್‌ ಅವರ ಸಂಸ್ಥೆಗೆ ತೆರಳಿ ವಿಚಾರಿಸಿದ್ದು, ಆತ ಅಲ್ಲಿ ಇದೇ ಮಾದರಿಯ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತ್ತಾಗಿರುವುದು ತಿಳಿದುಬಂದಿದೆ.