ಮನೆ ಅಪರಾಧ ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರಿನ ಸಿಐಎಸ್​ಎಫ್ ಯೋಧ ಸಾವು

ಆಕಸ್ಮಿಕವಾಗಿ ಗುಂಡು ತಗುಲಿ ರಾಯಚೂರಿನ ಸಿಐಎಸ್​ಎಫ್ ಯೋಧ ಸಾವು

0

ರಾಯಚೂರು: ಆಕಸ್ಮಿಕವಾಗಿ ಗುಂಡು ತಗುಲಿ ಮಾನ್ವಿ ತಾಲೂಕಿನ ಆರ್​ ಜಿ ಕ್ಯಾಂಪ್‌ ಸಿಐಎಸ್​ಎಫ್ ಯೋಧ ರವಿಕಿರಣ್ (37) ಮೃತಪಟ್ಟಿದ್ದಾರೆ.

Join Our Whatsapp Group


ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ ಎಫ್) ಯೋಧ ರವಿಕಿರಣ್ ಚೆನೈನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡಿತ್ತಿದ್ದರು. ಸೋಮವಾರ (ಮೇ 20) ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ತಮ್ಮದೇ ಸರ್ವಿಸ್ ರೈಫಲ್​ನಿಂದ ಸಿಡಿದ ಗುಂಡು ತಾಗಿ ರವಿಕಿರಣ್ ತೀವ್ರವಾಗಿ​ ಗಾಯಗೊಂಡಿದ್ದರು.
ಕೂಡಲೆ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ ಫಲಿಸದೆ ಯೋಧ ರವಿಕಿರಣ ಮೃತಪಟ್ಟಿದ್ದಾರೆ.

ಯೋಧ ರವಿಕಿರಣ್​ ಪಾರ ಪಾರ್ಥಿವ ಶರೀರ ಇಂದು (ಮೇ 21) ಆರ್​ಜಿ ಕ್ಯಾಂಪ್​ಗೆ ತಲುಪಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮಾನ್ವಿ ಪಟ್ಟಣದ ಆರ್​ಜಿ ಕ್ಯಾಂಪ್​ನಲ್ಲಿ ಯೋಧನ ಅಂತ್ಯಕ್ರಿಯೆ ನೆರವೇರಿದೆ. ಯೋಧ ರವಿಕಿರಣ್​ ಅಂತ್ಯಕ್ರಿಯೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಮತ್ತು ಗ್ರಾಮಸ್ಥರು ಯೋಧನಿಗೆ ಅಂತಿಮ‌ ನಮನ ಸಮರ್ಪಿಸಿದರು.