ಮನೆ ಅಪರಾಧ ರೈಲಿನಲ್ಲಿ ಸೀಟಿಗಾಗಿ ಗಲಾಟೆ: ವ್ಯಕ್ತಿಗೆ ಚಾಕು ಇರಿತ

ರೈಲಿನಲ್ಲಿ ಸೀಟಿಗಾಗಿ ಗಲಾಟೆ: ವ್ಯಕ್ತಿಗೆ ಚಾಕು ಇರಿತ

0

ಬೆಂಗಳೂರು ಗ್ರಾಮಾಂತರ: ರೈಲಿನಲ್ಲಿ ಸ್ನೇಹಿತನಿಗೆ ಹಿಡಿದಿದ್ದ ಸೀಟಿನಲ್ಲಿ ಕೂರುವ ವಿಚಾರದಲ್ಲಿ ಗಲಾಟೆಯಾಗಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ.

Join Our Whatsapp Group

ಗಂಗಾಧರ್ ಹಾಗೂ ಯೋಗೇಶ್​ಗೆ ಹಲ್ಲೆಗೊಳಗಾದವರು.

ಯಶವಂತಪುರದಿಂದ ಬೆಂಗಳೂರು-ಹಾಸನ ಮಾರ್ಗದ ರೈಲಿನಲ್ಲಿ ಗಂಗಾಧರ್ ಹಾಗೂ ಯೋಗೇಶ್ ಬಂದಿದ್ದರು.

ಈ ವೇಳೆ ಪೋನ್​ ಕರೆಗೆ ನೆಟ್ವರ್ಕ್ ಸಮಸ್ಯೆ ಇದ್ದ ಕಾರಣಕ್ಕೆ ಕುಳಿತಿದ್ದ ಸೀಟ್ ನೋಡಿಕೊಳ್ಳಲು ಸ್ನೇಹಿತ ಯೋಗೇಶ್​ಗೆ ತಿಳಿಸಿ ಗಂಗಾಧರ್ ಡೋರ್ ಬಳಿ ಹೋಗಿದ್ದಾರೆ. ರೈಲು ನೆಲಮಂಗಲ ಬರುತ್ತಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಸೀಟ್​ನಲ್ಲಿ ಕೂರಲು ಯತ್ನಿಸಿದ್ದ. ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ತರಕಾರಿ ಕೊಯ್ಯುವ ಚಾಕುವಿನಿಂದ ಹಲ್ಲೆ ನಡೆಸಿ ರೈಲಿನಿಂದ ಪರಾರಿಯಾಗಿದ್ದಾನೆ.

 ಗಾಯಾಳುಗಳಿಗೆ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಾಕು ಇರಿದು ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಈ ಕುರಿತು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.