ಮನೆ ಅಪರಾಧ ತಂಜಾವೂರು: ಪಾದಯಾತ್ರಿಗಳ ಮೇಲೆ ವ್ಯಾನ್‌ ಹರಿದು ನಾಲ್ವರು ಸಾವು

ತಂಜಾವೂರು: ಪಾದಯಾತ್ರಿಗಳ ಮೇಲೆ ವ್ಯಾನ್‌ ಹರಿದು ನಾಲ್ವರು ಸಾವು

0

ತಂಜಾವೂರು: ತಂಜಾವೂರು- ತಿರುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಯಾತ್ರಿಗಳ ಮೇಲೆ ವ್ಯಾನ್‌ ಹರಿದ ಪರಿಣಾಮ ಒಬ್ಬ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

Join Our Whatsapp Group

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಪಾದಯಾತ್ರಿಗಳು ತೀರ್ಥಯಾತ್ರೆ ಕೈಗೊಂಡಿದ್ದರು. ಸಮಯಪುರಂನ ಮಾರಿಯಮ್ಮನ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ತಿರುಚ್ಚಿಗೆ ತೆರಳುತ್ತಿದ್ದ ವ್ಯಾನ್‌ವೊಂದು ವೇಗವಾಗಿ ಚಲಾಯಿಸಿದ್ದರ ಪರಿಣಾಮ ವಳಂಬಕುಡಿ ಗ್ರಾಮದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಯಾತ್ರಿಕರ ಮೇಲೆ ಹರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡ ಇಬ್ಬರನ್ನು ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ  ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.