ಋತುಸ್ರಾವಾಗುವ ಹದಿವಸ್ಸಿನ ಹೆಣ್ಣು ಮಕ್ಕಳು ನೋವು ಅನುಭವಿಸದಿರುವವರೇ ವಿರಳ.ಅಂತಹ ಸಂದರ್ಭಗಳಲ್ಲಿ ಸುಲಭವಾಗಿ ಮನೆಯಲ್ಲೇ ವೈದ್ಯ ಮಾಡಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಈ ನೋವು ನಿವಾರಣೆಗೆ ಎಳ್ಳು ಬೆಲ್ಲ ಕುಟ್ಟಿ ಚಿಗಳಿ ಉಂಡೆಗಳನ್ನು ಆರತಿ ಮಾಡಿ, ಬೇರೆ ಹೆಣ್ಣು ಮಕ್ಕಳಿಗೂ ಕೊಟ್ಟು ತಮ್ಮ ಮಕ್ಕಳು ಋತುಮತಿಯಾದಾಗ ಕೊಡುವ ಪದ್ಧತಿ ಇತ್ತು. ಆದರೆ ಈಗ ಅದು ಹೆಚ್ಚಾಗಿ ಕಾಣುತ್ತಿಲ್ಲ.
1. ಕರಿ ಎಳ್ಳನ್ನು ಹುರಿದು, ಬೆಲ್ಲ, ಏಲಕ್ಕಿ ಸೇರಿಸಿ ಕುಟ್ಟಿ ಒಂದೊಂದು ಉಂಡೆ ತಿನ್ನಿಸುವುದರಿಂದ ಮುಟ್ಟು ನೋವು ಗುಣವಾಗುವುದು.
2. ಸೀಬೆಹಣ್ಣುಗಳನ್ನು ಸಂಗ್ರಹಿಸಿ, ತೊಳೆದು ಮಿಕ್ಸಿಯಲ್ಲಿ ಹಾಕಿ ತೆಗೆದುಕೊಂಡು ಶೋಧಿಸಿ ಬೀಜಗಳನ್ನು ಬಿಸಾಡಿ ಹಾಲು ಬೆರೆಸಿ ಕುಡಿದರೆ ಋತುಶೂಲೆ ನಿವಾರಣೆ ಆಗುವುದು.
3. ಮೂಲಂಗಿ,ಮೂಲಂಗಿ ಸೊಪ್ಪು, ಚೆನ್ನಾಗಿ ತೊಳೆದು, ಕೋಸಂಬರಿ ರೀತಿಯಲ್ಲಿ ತಿನ್ನುವುದರಿಂದ ನೋವು ನಿವಾರಣೆ ಆಗುವುದು.
4. ಒಂದು ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಇಟ್ಟು, ಮರಳುತ್ತಿ ರುವಾಗ ಸೋಂಪು ಕಾಳಿನ ಪುಡಿಯನ್ನು ಹಾಕಿ ಕಷಾಯವನ್ನು ಮಾಡಿ ಸಕ್ಕರೆ ಬೆರೆಸಿ,ಕುಡಿಯುವುದರಿಂದ ನೋವು ನಿವಾರಣೆ ಆಗುವುದು.
5. ಮೂಲಂಗಿ ಬೀಜವನ್ನು, ಸ್ವಲ್ಪ ಮಜ್ಜಿಗೆಯಲ್ಲಿ ನೆನೆ ಹಾಕಿ ಸ್ವಲ್ಪ ಹೊತ್ತು ಬಿಟ್ಟ ಮೇಲೆ ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಮತ್ತಷ್ಟು ಮಜ್ಜಿಗೆ ಸೇರಿಸಿ ಕುಡಿಯಲು ಋತುಶೂಲೆ ನಿವಾರಣೆ ಆಗುವುದು.
6. ಕೆಲವರು ತಮಗೆ ಮಕ್ಕಳಾಗುವುದೆಂಬ ಭಯ ಅಥವಾ ದೇವರ ಸೇವೆಗೆ ಅಥವಾ ಮದುವೆ, ತಿಥಿಗಳಿಗೆ ಹೋಗಬೇಕಾದಾಗ ಮುಟ್ಟು ಮುಂದೂಡಬೇಕಾಗಬಹುದು. ಆ ಸಮಯದಲ್ಲಿ ದಾಲ್ಚಿನ್ನಿಯ ಚೂರ್ಣ ಒಂದು ಚಮಚ ಜೇನು ತುಪ್ಪದಲ್ಲಿ ದಿನಕ್ಕೆರಡು ವೇಳೇ ಸೇವಿಸುತ್ತಿರಲು ಮುಟ್ಟು ಮುಂದೆ ಹೋಗುವುದು.
7. ಪುರುಷರತ್ನವನ್ನು ಹಾಲಿನಲ್ಲಿ ಹಾಕಿ ಕುಡಿಸಿದರೆ ಋತುಶೂಲೆ ನಿವಾರಣೆ ಆಗುತ್ತದೆ.
8. ಕರಿ ಹತ್ತಿ ಸೊಪ್ಪನ್ನು ಅರೆದು ಹಾಲಿನಲ್ಲಿ ಕುಡಿದರೆ ಋತುಸ್ರಾವ ಆತಿಯಾಗಿ ನೋವಿದ್ದರೆ ಗುಣವಾಗುವುದು.
9. ಏನು ಮದರಂಗಿ ಸೊಪ್ಪನ್ನು ಅರೆದು ಮಜ್ಜಿಗೆಯಲ್ಲಿ ಕುಡಿಸಿದರೆ ಅಕ್ರಮ, ಋತುಶೂಲೆ ನಿವಾರಣೆ ಆಗುವುದು.
10. ಶಾವಂತಿಗೆ ಎಲೆಯನ್ನು ಕುಟ್ಟಿ ಅತಿರಕ್ತ ಸ್ರಾವವಾಗುವವರಿಗೆ ಹಾಲಿನಲ್ಲಿ ಕುಡಿಸಿದರೆ ನೋವು ನಿವಾರಣೆಯಾಗಿ,ಸ್ರಾವ ಕಡಿಮೆಯಾಗುವುದು.
11. ವಜ್ರ ನೀಲಿ ಸೊಪ್ಪನ್ನು ಅರೆದು,ಮಜ್ಜಿಗೆಯಲ್ಲಿ ಸಕ್ಕರೆ ಬೆರೆಸಿ ಕುಡಿಯಲು ಋತು ದೋಷಗಳೆಲ್ಲವೂ ನಿವಾರಣೆ ಆಗುವುದು.
12. ವಿಷಮಧಾರಿ ಸೊಪ್ಪನ್ನು ಅರೆದು, ಹಾಲಿನಲ್ಲಿ ಸಕ್ಕರೆ ಬೆರೆಸಿ ಸೇವಿಸಲು ಮುಟ್ಟಾದ ಸಮಯದಲ್ಲಾಗುವ ಎಲ್ಲಾ ತೊಂದರೆಗಳೂ ನಿವಾರಣೆ ಆಗುವುದು.
13. ಮುಟ್ಟಿದರೆ ಮುನಿ ಸೊಪ್ಪನ್ನು ತಂದು,ಹಾಲಿನಲ್ಲಿ ಅರೆದು ಹಾಲಿನಲ್ಲಿ ಸಕ್ಕರೆ ಸೇರಿಸಿ ಕುಡಿದರೆ ಮತ್ತು ಹಾಲು ಅನ್ನ ಪಥ್ಯದಿಂದರಲು ನಿವಾರಣೆಯಾಗಿ ಗಂಡು ಮಗು ಜನನವಾಗುವುದು.
14. ಒಂದು ಚಮಚ ತುಂಬೆ ರಸ, ಅಷ್ಟೇ ನಿಂಬೆರಸ ಒಂದು ಚಿಟಿಕೆ ಉಪ್ಪಿನ ಪುಡಿ ಸೇರಿಸಿ ಕುಡಿದು,ಮಜ್ಜಿಗೆ ಅನ್ನ ಪತ್ತೆ ದಿಂದಿರಲು ಎಲ್ಲಾ ದೋಷಗಳೂ ನಿವಾರಣೆಯಾಗಿ ಮುಟ್ಟು ಬಿಟ್ಟು ನಿವಾರಣೆ ಆಗುವುದು.
15. ಪ್ರತಿದಿನವೂ ಹುರುಳಿ ಕಾಳಿನ ಸಾರು, ಪಲ್ಯ,ಚಟ್ನಿ,ಮುಂತಾದ ಅನೇಕ ವಿಧದ ಪದಾರ್ಥ ಗಳನ್ನು ಸೇವಿಸಿದ್ದರಿಂದ ಮುತ್ತು ಗುಟ್ಟು ಗುಣವಾಗುವುದು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.