ಮನೆ ಅಪರಾಧ ಅಂತಾರಾಜ್ಯ ಡಕಾಯಿತರ ಬಂಧನ: ಮೂವರು ಪರಾರಿ, ಪೊಲೀಸರಿಂದ ಶೋಧ

ಅಂತಾರಾಜ್ಯ ಡಕಾಯಿತರ ಬಂಧನ: ಮೂವರು ಪರಾರಿ, ಪೊಲೀಸರಿಂದ ಶೋಧ

0

ಜೊಯಿಡಾ: ಅಂತಾರಾಜ್ಯ ಡಕಾಯಿತ ತಂಡದ ಇಬ್ಬರನ್ನು ಎರಡು ಪಿಸ್ತೂಲ್‌ ಸಹಿತ ಬಂಧಿಸಿದ ಘಟನೆ ರಾಮನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರವಿವಾರ ನಡೆದಿದೆ.

Join Our Whatsapp Group

ಪೊಲೀಸ್‌ ಇಲಾಖೆಗೆ ಬಂದ ಖಚಿತ ಮಾಹಿತಿಯಂತೆ ಅನಮೊಡ ಹತ್ತಿರ ಗೋವಾದಿಂದ ಬಸ್ಸಿನಲ್ಲಿ ಬರುತ್ತಿದ್ದ ಐವರು ಡಕಾಯಿತರನ್ನು ಹಿಡಿಯಲು ಗೋವಾ- ಕರ್ನಾಟಕ ಗಡಿ ಭಾಗದ ಅಬಕಾರಿ ತನಿಖಾ ಠಾಣೆ ಸಿಬಂದಿ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ ಮತ್ತು ರಾಮನಗರ ಪಿಎಸ್‌ಐ ಬಸವರಾಜ ಮಬನೂರ ಇವರ ತಂಡ ಪ್ರಯತ್ನಿಸುತ್ತಿರುವ ವೇಳೆ ಮೂವರು ತಪ್ಪಿಸಿಕೊಂಡಿದ್ದು, ಉಳಿದಿಬ್ಬರನ್ನು ಬಂಧಿಸಲಾಗಿದೆ.

ರಾಜಸ್ಥಾನ ಮೂಲದ ಗೋವರ್ಧನ ಸಿಂಗ್‌ ರಾಜಪುರೋಹಿತ ಮತ್ತು ಶಾಮಲಾಲ್‌ ಮೇಘವಾಲ ಬಂಧಿತರು. ಇವರಲ್ಲಿದ್ದ ಎರಡು ಪಿಸ್ತೂಲ್‌ ಮತ್ತು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿರುವ ಮೂವರಿಗಾಗಿ ಶೋಧ ನಡೆಯುತ್ತಿದೆ.

ಬಲ್ಲ ಮೂಲದಿಂದ ತಿಳಿದು ಬಂದ ಮಾಹಿತಿಯಂತೆ ಗೋವಾದಲ್ಲಿನ ಚಿನ್ನದ ಅಂಗಡಿಯೊಂದರಿಂದ ದರೋಡೆ ಬಂದ ಡಕಾಯಿತರ ತಂಡ ಇದಾಗಿದ್ದು, ಕಳ್ಳತನ ಮಾಡಲು ಸಾಧ್ಯವಾಗದೆ ಮರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.