ಮನೆ ಅಪರಾಧ ಕಲಬುರಗಿ: ಮಹಿಳೆಯನ್ನು ಕಾಪಾಡಲು ಹೋಗಿ ಇಬ್ಬರು ಭೀಮಾ ನದಿಪಾಲು

ಕಲಬುರಗಿ: ಮಹಿಳೆಯನ್ನು ಕಾಪಾಡಲು ಹೋಗಿ ಇಬ್ಬರು ಭೀಮಾ ನದಿಪಾಲು

0

ಕಲಬುರಗಿ: ಭೀಮಾ‌ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಕಾಪಾಡಲು ಹೋಗಿ ಇಬ್ಬರು ನೀರು ಪಾಲಾಗಿರುವ ಘಟನೆ ಕಲಬುರಗಿಯ ಆಲಮೇಲ ತಾಲೂಕಿನ ದೇವಣಗಾಂವ್ ಬಳಿಯ ಅಫಜಲಪುರ-ದೇವಣಗಾಂವ್ ಬ್ರೀಡ್ಜ್ ಬಳಿ ನಡೆದಿದೆ.

Join Our Whatsapp Group

ಶಿವು ಹಾಗೂ ರಾಜು ಮೃತ ದುರ್ದೈವಿಗಳು.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೃತ ಶಿವು ಪತ್ನಿ ಲಕ್ಷ್ಮಿ ಮಂಗಳವಾರ ಸಂಜೆ ಅಫಜಲಪುರ-ದೇವಣಗಾಂವ್ ಬ್ರೀಡ್ಜ್​​ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲಕ್ಷ್ಮಿಯನ್ನು ಉಳಿಸಲು ಪತಿ ಶಿವು ಹಾಗು ಆತನ ಸಂಬಂಧಿ ನದಿಗೆ ಹಾರಿದ್ದಾರೆ.

ಕೂಡಲೆ ಮೀನುಗಾರರು ನದಿಗೆ ಹಾರಿದ್ದು, ಲಕ್ಷ್ಮಿಯನ್ನು ಕಾಪಾಡಿದ್ದಾರೆ. ಆದರೆ, ಲಕ್ಷ್ಮಿ ಪತಿ ಶಿವು ಮತ್ತು ಆತನ ಸಂಬಂಧಿ ಭೀಮಾ‌ ನದಿ ಪಾಲಾಗಿದ್ದಾರೆ. ಭೀಮಾ ನದಿಯಲ್ಲಿ ಮೃತ ಶಿವು ಹಾಗೂ ರಾಜು ಮುಳುಗುವ ದೃಶ್ಯ ಸ್ಥಳೀಯರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವಿಚಾರ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿಗಳು ಮತ್ತು ಅಫಜಲಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸತತ ಕಾರ್ಯಾಚರಣೆ ನಡೆಸಿ, ಶಿವು ಮತ್ತು ರಾಜುವಿನ ಮೃತದೇಹಗಳು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ್ ಬ್ರಿಡ್ಜ್ ಬಳಿ ಪತ್ತೆ ಹಚ್ಚಿದ್ದಾರೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.