ಕುಣಿಗಲ್: ಇಬ್ಬರು ಸ್ನೇಹಿತರ ನಡುವೆ ವೈಮನಸ್ಸು ಉಂಟಾಗಿ ಹಾಲೋ ಬ್ಲಾಕ್ ಇಟ್ಟಿಗೆಯಿಂದ ಓರ್ವನ ತಲೆಗೆ ಜಜ್ಜಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದ ಕೆ.ಆರ್.ಎಸ್ ಅಗ್ರಹಾರದಲ್ಲಿ ಸೋಮವಾರ (ಆ.12) ನಡೆದಿದೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅಂಗರಹಳ್ಳಿ ಗ್ರಾಮ ಹಾಲಿ ತಾಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ವಾಸಿ ರವಿ (40) ಕೊಲೆಯಾದ ವ್ಯಕ್ತಿ. ಈತ ಗಾರೆ ಕೆಲಸಗಾರನಾಗಿದ್ದ. ಶಿವಕುಮಾರ್ ಕೊಲೆ ಆರೋಪಿ.
ಘಟನೆ ವಿವರ: ರವಿ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಒಂದೇ ಕಡೆ ಗಾರೆ ಕೆಲಸ ಮಾಡುತ್ತಿದ್ದರು. ಭಾನುವಾರ ರವಿ ಗಾರೆ ಕೆಲಸಕ್ಕೆ ಕುಣಿಗಲ್ ಗೆ ಬಂದಿದ್ದರೆ ಆತನ ಹೆಂಡತಿ ಭಾಗ್ಯ ಅವರು ದೀಕ್ಷಾವಾಟರ್ ಗೆ ಕೆಲಸಕ್ಕೆ ಬಂದಿದ್ದರು. ಭಾಗ್ಯ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹೋಗಿದ್ದಾರೆ. ಆದರೆ ರವಿ ಮನೆಗೆ ಹೋಗದೆ ಶಿವಕುಮಾರ್ ಶೆಡ್ ಗೆ ಹೋಗಿದ್ದಾನೆ.
ಮಳವಳ್ಳಿಯ ಶಿವಕುಮಾರ್ ಇಲ್ಲಿನ ಕೆಆರ್ ಎಸ್ ಅಗ್ರಹಾರದ ನಾಗರಾಜು ಎಂಬುವರು ಬಳಿ ಕೆಲಸ ಮಾಡುತ್ತಿದ್ದ. ಶೆಡ್ ನಲ್ಲಿ ಇವರಿಬ್ಬರ ನಡುವೆ ರಾತ್ರಿ ಏನು ನಡೆದಿದೆ ಎಂದು ತಿಳಿದು ಬಂದಿಲ್ಲ. ಈ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶಿವಕುಮಾರನು ರವಿಯ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೇಸ್ತ್ರಿ ನಾಗರಾಜು ಅವರ ಅಣ್ಣ ರಂಗಸ್ವಾಮಿ ಅವರು ಗೋಡೌನ್ ನಲ್ಲಿ ಇರುವ ಗಾರೆ ಸಾಮಾಗ್ರಿ ತೆಗೆದುಕೊಳ್ಳಲು ಹೊದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆದರೆ, ಕೊಲೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ,
ಈ ಸಂಬಂಧ ಡಿವೈಎಸ್ ಪಿ ಓಂಪ್ರಕಾಶ್, ಸಿಪಿಐ ನವೀನ್ ಗೌಡ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.