ಮನೆ ಅಪರಾಧ ಆಸ್ತಿ ವಿವಾದ: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ

ಆಸ್ತಿ ವಿವಾದ: ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊಲೆ

0

ಮೈಸೂರು(Mysuru): ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ  ಓರ್ವ ವ್ಯಕ್ತಿಯ ಕೊಲೆಯಾಗಿರುವ ಘಟನೆ ಜಯಪುರ ಹೋಬಳಿಯ ಕರಡಿಮರಯ್ಯನ ಹುಂಡಿ  ಗ್ರಾಮದಲ್ಲಿ  ಬುಧವಾರ ಸಂಜೆ ನಡೆದಿದೆ.

ಗ್ರಾಮದ  ನಂಜುಂಡ ಎಂಬುವರೇ ಕೊಲೆಯಾದ ದುರ್ದೈವಿ.

ಆಸ್ತಿ ವಿಚಾರಕ್ಕೆ ಗಲಾಟೆ ವಿಕೋಪಕ್ಕೆ ತಿರುಗಿ ನಂಜುಂಡ ಎಂಬುವರಿಗೆ ಮಾಲೇಗೌಡರ ಮಕ್ಕಳಾದ ಶಿವಣ್ಣ ಮತ್ತು ಕೃಷ್ಣ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ್ದಾರೆ. ಗಾಯಗೊಂಡ ನಂಜುಂಡ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಂಜುಂಡ ಸಾವನ್ನಪ್ಪಿದ್ದಾರೆ.

ಕೊಲೆಮಾಡಿದ ಇಬ್ಬರು ಆರೋಪಿಗಳಾದ ಶಿವಣ್ಣ ಮತ್ತು ಕೃಷ್ಣ ಪೊಲೀಸರ ವಶದಲ್ಲಿದ್ದು, ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.