ಮನುಷ್ಯರ ಗುಣ ಸ್ವಭಾವಗಳು ಹೇಗೆ ನಿರ್ಧಾರವಾಗುತ್ತವೆ? ಕುಟುಂಬ, ಪರಿಸರ, ಅನುಭವ, ಲಿಂಗ, ಪ್ರದೇಶ… ಹೀಗೆ ಅನೇಕ ಉತ್ತರಗಳಿವೆ. ವಿಕಾಸದ ತತ್ವಗಳನ್ನು ಅರ್ಥ ಮಾಡಿಕೊಂಡರೆ ಸ್ವಭಾವದ ನಿರ್ಧಾರದಲ್ಲಿ ಒಂದು ಸೂತ್ರ ಇರುವುದನ್ನು ಕಾಣಬಹುದು.ಎಲ್ಲರ ಮನುಷ್ಯರ ಸ್ವಭಾವಗಳಿಗೂ ಒಂದೇ ರೀತಿ ಇರುತ್ತವೆ ಎನ್ನುವುದರ ಒಳಗೆಯೇ ಗಂಡಸರ ಸ್ವಭಾವಗಳು ಹೆಂಗಸರ ಸ್ವಭಾವಗಳಿಗಿಂತ ಭಿನ್ನ ರೀತಿಯದ್ದಾಗಿರುತ್ತದೆಹ ಎಂಬುದು ಸೇರಿಕೊಳ್ಳುತ್ತದೆ ಆದರೆ ಒಳಗೆಯೇ ಅಮೆರಿಕದ ಗಂಡು ಮತ್ತು ಹೆಣ್ಣಿನ ಸ್ವಭಾವವು ಭಾರತೀಯ ಗಂಡು ಮತ್ತು ಹೆಣ್ಣಿನ ಸ್ವಭಾವಗಳೂ ಬೇರೆ ಬೇರೆಯಾಗಿರುತ್ತದೆ.ಎನ್ನುವುದು ಸೇರಿಕೊಳ್ಳುತ್ತದೆ. ಹೀಗೆ ಇದು ಬೆಳೆಯುತ್ತಾ ಬೆಳೆಯುತ್ತಾ ಸಾಗಿ ಸಂಗೀತ್ ಸಂಕುಚಿತಗೊಂಡು ಒಂದು ಕುಟುಂಬದವರಲ್ಲಿ ಸಾಮಾನ್ಯ ಸ್ವಭಾವಗಳಿರುತ್ತವೆ ಎಂಬ ಅಂಸದ ಒಳಗೆಯೇ ಒಬ್ಬ ವ್ಯಕ್ತಿಯ ಸ್ವಭಾವ ಬೇರೆಯಾಗಿರುತ್ತದೆ ಎಂಬಲ್ಲಿಗೆ ಬಂದು ನಿಲ್ಲುತ್ತದೆ.ಸ್ವಭಾವದ ವಿಕಾಸದಲ್ಲಿ ಇರುವ ತತ್ವವೇನೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವಕ್ಕಿಂತ ಬೇರೆಯದಾದ ಸ್ವಭಾವವನ್ನು ಹೊಂದಿರುತ್ತಾನೆ ಎನ್ನುವುದು ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವವನ್ನು ಹೊಂದಿರುತ್ತಾನೆ ಎನ್ನುವುದಕ್ಕೂ ಎರಡು ಒಟ್ಟೊಟ್ಟಿಗೆ ಇರುತ್ತದೆ. ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವಕ್ಕಿಂತ ಬೇರೆಯದೆ ಸ್ವಾಭಾವವನ್ನು ಹೊಂದಿರುತ್ತಾನೆ ಎಂಬ ಅಂಶವು ವ್ಯಕ್ತಿಯ ಸ್ವತಂತ್ರ ಅಸ್ತಿತ್ವವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ಜಗತ್ತಿನ ಎಲ್ಲ ಜನರ ಸ್ವಭಾವವನ್ನು ಹೊಂದಿರುತ್ತಾನೆ ಎನ್ನುವುದು ಮಾನವನ ಸಮಾನತೆಯನ್ನು ಸೂಚಿಸುತ್ತದೆ.
ಸ್ವಭಾವದ ಈ ಸ್ವರೂಪಕ್ಕೆ ಕಾರಣವೇನು? ಸ್ವಭಾವಗಳು ಮೂರು ರೀತಿಯಲ್ಲಿ ಪ್ರಭಾವಿತಗೊಳ್ಳುತ್ತವೆ. ಮೊದಲನೇದು ಜೈವಿಕ ಅಂಶಗಳು. ಆಹಾರ,ನಿದ್ರೆಯಂತಹ ಸಂಗತಿಗಳು. ಇವು ಜೈವಿಕ ಅಂಶಗಳಾಗಿದ್ದು, ಎಲ್ಲ ಮಾನವರಿಗೆ ಮಾತ್ರವಲ್ಲ; ಎಲ್ಲ ಜೀವಿಗಳಿಗೂ ಸಮಾನವಾದ ಅನುಭವದ ಸಂಗತಿಗಳಾಗಿವೆ. ಎರಡನೆಯದು ಮಾನವರಿಗೆ ಮಾತ್ರ ಸಮಾನವಾಗಿರುವ ಅಂಶಗಳು. ಉದಾಹರಣೆಗೆ ಸ್ವಾಭಾವಿಕ ನ್ಯಾಯ ಎಂಬ ಅಂಶವು ಎಲ್ಲ ರಾಷ್ಟ್ರಗಳಲ್ಲಿಯ; ಎಲ್ಲ ಕಾಲದಲ್ಲಿಯೂ ಅಸ್ತಿತ್ವದಲ್ಲಿದ್ದ ಸಂಗತಿಯಾಗಿದ್ದು ಎಲ್ಲ ಮನುಷ್ಯರಿಗೂ ಸಮಾಧಾನ ಸಂಗತಿಯಾಗಿದೆ.
ಮೂರನೆಯದು ವ್ಯಕ್ತಿಗೆ ಆಗುವ ವೈಯಕ್ತಿಕ ಅನುಭವಗಳು. ಇದು ಜೈವಿಕ ಮತ್ತು ಸಮಾನ ಅಂಶಗಳೆರಡು ಒಳಗೊಂಡಂತೆ ಒಬ್ಬ ವ್ಯಕ್ತಿಗೆ ಮಾತ್ರ ಪ್ರತ್ಯೇಕವಾದ ಅನುಭವವನ್ನು ಉಂಟು ಮಾಡುವ ಸಂಗತಿಯೂ ಆಗಿದೆ. ನಮ್ಮ ವ್ಯಕ್ತಿತ್ವವು ಸಮೃದ್ಧವಾಗಿ ಬೆಳೆಯುವುದು ಈ ಮೂರನೆಯ ಅಂಶದಲ್ಲಿ. ಆ ವ್ಯಕ್ತಿತ್ವ ವಿಕಾಸಕ್ಕೆ ಅನುಕೂಲಕರವಾದ ಅನುಭವಗಳೂ ಆಗಬಹುದು ಪ್ರತಿಕೂಲವಾದ ಅನುಭವಗಳೂ ಆಗಬಹುದು. ಅನುಕೂಲಕರ ಅನುಭವವೇ ಆದಾಗ ಯಾವ ಸಮಸ್ಯೆಯೂ ಇಲ್ಲ.ಪ್ರತಿಕೂಲ ಅನುಭವಗಳಾದಾಗ ನಮ್ಮ ಯೋಜನೆಯ ಸಾಮರ್ಥ್ಯವು ಅದನ್ನು ಯಾವ ರೀತಿ ಅನುಕೂಲಕರವಾಗಿ ಬಳಸಿಕೊಳ್ಳಲು ಶಕ್ತರವಾಗಿದೆ ಎಂಬುದರ ಆಧಾರದ ವ್ಯಕ್ತಿತ್ವದ ವಿಕಾಸ ನಿರ್ಧಾರವಾಗುತ್ತದೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.