ಕಳಸ್ತ್ಯ ದೇವಾಲಯದ ಕಡತದಲ್ಲಿ ಅಗತ್ಯ ಉಲ್ಲೇಖಿತ ಹೊರನಾಡ ಹೋರಾಟ ಶ್ರೀ ಅನ್ನಪೂರ್ಣೇಶ್ವರಿ .
ಶಿವನು ಬ್ರಹ್ಮ ಹತ್ಯಾ ಪಾಪ ನಿವಾರಣೆಗಾಗಿ ನಾನಾ ಕಡೆ ಅಲೆದಾಡಿದನು.ಕೊನೆಗೆ ಸುಂದರ ಕಾಡುಳ್ಳ ಸಹರಿ ತಪ್ಪಲಿಗೆ ಬಂದನು.
ತತ್ರ ಘೋರಂ ತಪಃ ಕೃತ್ವಾ
ಲಿಪ್ತ ದೋಷಮಮಾರ್ಜಯತ್ |
ಜಾಹ್ನವೀ ತೋಯಪತೇನ
ಮಹಾನ್ ಹೃದಃ ಸಮಾಭವತ್ ||*
ಅಲ್ಲಿ ಘೋರ ತಪಸ್ಸನ್ನು ಮಾಡಿ ಅಂಟಿದ ಪಾಪವನ್ನು ಕಳೆದುಕೊಂಡನು. ಗಂಗಾಜಲದ ಅಭಿಷೇಕದಿಂದಾಗಿ ಒಂದು ಸರೋವರವು ಉಂಟಾಯಿತು.
ಸಃ ಹೃದಃ ವರದಾ ನಾಮ್ನಾ
ವಿಖ್ಯಾತ ಜಗತೀತಲೇ |
ನಾನಾ ತೀರ್ಥೈ ಚ ಸಂಯುಕ್ತಃ
ಶೈವ ಕ್ಷೇತ್ರಂ ಸಮಾ ಭವತ್ ||
ಹಳ್ಳವು ಜಗತ್ತಿನಲ್ಲಿ ವರದಾ ಎಂದು ಪ್ರಖ್ಯಾತವಾಯಿತು.
ತತಂ ಸಂ ಕುಟಜಾನಾಮ
ಪರ್ವತಂ ಪ್ರತಿ ಪ್ರಸ್ಥಿತಃ |
ಪಾರ್ವತಿ ಸಹಿತಃ ಶುಭಂಃ
ಸಾನಂದಮಯ ಮುಷಿತ ವಾನ್
ಅಲ್ಲಿಂದ ಪಾರ್ವತಿ ಸಹಿತನಾದ ಪರಶಿವನು ಕೊಡಚಾದ್ರಿ ಪರ್ವತದ ಕಡೆಗೆ ಹೊರಟು ಆನಂದದಿಂದ ವಾಸಿಸ ತೊಡಗಿದನು.
ವಿಶ್ವನಾಥ ಸ್ವಯಂ ಶಂಭು
ಪ್ರಸ್ಥಿತಃ ಕಲಶಂಪ್ರಿತಿ |
ತತ್ರತ್ಯ ರಮ್ಯತಾಃ ದೃಷ್ಟ್ವ
ತದ್ದೇಶೇ ಸ ಸ್ಥಿತಃ ಮುದಾ ||
ವಿಶ್ವನಾಥನೇ ಆದ ಶಂಭು ಕಳಸಾದ ಕಡೆಗೆ ಹೊರಟನು ಅಲ್ಲಿಯ ಪ್ರಕೃತಿ ರಮಣೀಯತೆಯ ಸೌಂದರ್ಯವನ್ನು ನೋಡಿದ ಅವನು ಅಲ್ಲಿಯೆ ಆನಂದದಿಂದ ನೆಲೆನಿಂತನು.
*ಅನ್ನಪೂರ್ಣ ಮಹಾದೇವೀ
ಮಹೇಶ ಪ್ರಾಣವಲ್ಲ ಬಾ|
ಜೀವಿನಃ ದುಃಖ ನಾಶಾರ್ಥಂ
ಸ್ಥಿತಾ ತ್ರ ಮಹಾಂಗಣೇ ||
ಮಹೇಶನ ಪ್ರಾಣವಲ್ಲಬೆಯೂ, ಮಹಾದೇವಿಯೂ ಆದ ಅನ್ನಪೂರ್ಣೇಯು ಜೀವಿಗಳ ದುಃಖ ಸಮನಕ್ಕಾಗಿ ಆ ಮಹಾ ಪ್ರದೇಶದಲ್ಲಿ ನೆಲೆ ನಿಂತಳು.
ಅನ್ನದಾ ಪನಾದಾ ದೇವೀ
ಜೀವಿನಾಮ ಭಯಂಕರೀ |
ಪೊರಾನಾಡು ಇತಿವಿಪಿನೇ
ಸ್ಥಿತಾ ಲೋಕ ಹಿತಾಯ ಚ ||
ಅನ್ನದಾತೆಯೂ, ಜಲದಾತೆಯೂ ದೇವಿಯೂ, ಜೀವಿಗಳಿಗೆ ಅಭಯ ನೀಡುವವಳೂ ಆಗ ಅನ್ನಪೂರ್ಣೇಶ್ವರಿಯು ಪೊರನಾಡು ಎಂಬ ಮಹಾರಣ್ಯದಲ್ಲಿ ಲೋಕಹಿತಕ್ಕಾಗಿ ನಿಂತಳು.
ಅಗಸ್ತ್ಯೋ ನಾಮ ಮಹರ್ಷಿಃ
ಯಾತ್ರಾರ್ಥೀ ಸನ್ ಪ್ರಸ್ಥಿತಃ |
ದೇವಿಂ ಅನ್ನಪೂರ್ಣಾಂ ವೀಕ್ಷ್ಯ
ಆನಂದಪೂರತೋಭವತ್ಪುರ ||
ಅಗಸ್ತ್ಯ ಮಹರ್ಷಿಗಳು ಯಾತ್ರಾರ್ಥಿಯಾಗಿ ಹೊರಟು ಇಲ್ಲಿ ದೇವಿ ಅನ್ನಪೂರ್ಣೆಯನ್ನು ನೋಡಿ ಆನಂದ ಪೂರ್ಣರಾದರು.
ದೇವಿ ಮನ್ನ ಪೂರ್ಣಾಂ ನತ್ವಾ
ನಾನಾದ್ರೆವ್ಯ್ಯೆ ರಪೂಜಯೇತ್ |
ಅಶೋಕಾದಿ ಗಂಧ ಪುಫ್ರೈ
ದೇವೀಮರ್ಚಯತ್ ಮುದಾ||
ದೇವಿ ಅನ್ನಪೂರ್ಣಗೆ ನಮಸ್ಕರಿಸಿ ನಾನಾ ದ್ರವ್ಯಗಳಿಂದ ಅರರ್ಚಿಸಿದರು.ಅಶೋಕ ಮೊದಲಾದ ಪರಿಮಳದ ಹೂವುಗಳಿಂದ ದೇವಿಯನ್ನು ಪೂಲೂಜಿಸಿದರು.
ದಕ್ಷಿಣ ಕಾಶೀತಿ ಖ್ಯಾತಂ
ಭದ್ರಾ ತೀರೇ ಪ್ರವಾಧಿತಮ್ |
ಅತ್ರ್ವೈವ ಕಲಶೇಶಾಖ್ಯಃ
ಸ್ಥಿತವಾನ್ ಜಗದೀಶ್ವರಃ ||
ಇದು ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿವಾಗಿದೆ. ಇಲ್ಲಿಯೇ ವಿಶ್ವೇಶ್ವರನು ಕಾಲೖಶೇಶ್ವರನೆಂಬ ಹೆಸರಿನಿಂದ ಪ್ರಖ್ಯಾತನಾಗಿದ್ದಾನೆ.
ಭೂಪಾಲಃ ಶೃತಬಿಂದ್ವಾಖ್ಯಃ
ಸ್ವಪಾಪ ಶಮನಾಯ ಚ ¡
ಪಂಚ ಸ್ನನಗಟ್ಟ ನಂತರ
ಆಕಾರಯನ್ಮಹಾವನೇ ||
ಶೃತಬಿಂದುವೆಂಬರಾಜನು ತನ್ನ ಪಾಪ ವಿಮೋಚನೆಗಾಗಿ ಈ ಮಹಾಮನದಲ್ಲಿ ಐದು ಸ್ಥಾನ ಘಟ್ಟಗಳನ್ನು ಸ್ಥಾಪಿಸಿದನು.
ಅಂಬಾಘಟ್ಟಃ ಕಾಶ್ಚಿ ದೇಖ
ಸ್ನಾನಘಟ್ಟೇಷು ಪಾವನಂ |
ವಾರಿಪಾತೇನ ಸಂಯುಕ್ತ
ಶುದ್ಧಸ್ಪಟಿಕ ನಿರ್ಮಲಃ ||
ಅಂಬ ಘಟ್ಟವೆಂಬುದು ಸ್ಥಾನ ಘಟಕಗಳಲ್ಲಿ ಪಾವನವಾಗಿದೆ. ಆ ಘಟಕವು ಪಾತಾಲದಿಂದ ಕೂಡಿದ್ದು ಶುದ್ದ ಸ್ಪಟಿಕ ನಿರ್ಮಲವಾಗಿದೆ.
ತತ್ರಾಸ್ತಿ ಶಿಲಾಮಹತೀ
ಮಾಧವಾಖ್ಯೇನ ಶೋಭಿತಾ|[
ನಾನಾ ಸರಃ ವಿಶೇಷೇಣ
ಶೋಭಿತ ಮತ್ರ ಭೂತಲೇ,||
ಇಲ್ಲಿ ಮಾಧವನೆಂಬ ಮಹಾ ಶಿಲೆ ಇದೆ.. ಇಲ್ಲಿ ವಿಶೇಷವಾದ ಹಲವಾರು ಸರೋವರಗಳಿದ್ದು ಭೂಮಿಯಲ್ಲಿ ಶೋಭಿಸುತ್ತವೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.