ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜ್ಯೋತಿ : ದಿನಾ ನಮ್ಮನೆಗೆ ಭಿಕ್ಷಕ್ಕೆ ಬರ್ತಿಯಲ್ಲ ಈ ಊರಲ್ಲಿ ಬೇರೆ ಮನೆಗಳಿಲ್ವೇ?
ವಾಸು : ಬೇರೆ ಮನೆ ಇದೆ ತಾಯಿ, ಆದರೆ ಒಂದೇ ಕಡೆ ಊಟ ಮಾಡು ಅಂತ ನನಗೆ ಡಾಕ್ಟರ್ ಹೇಳಿದ್ದಾರೆ.

Join Our Whatsapp Group

ಸಿಹಿ ತಿಂಡಿ ಮಾರುವ ಅಂಗಡಿಗೆ ಒಬ್ಬ ಕೆಲಸದವರು ಬೇಕಾಗಿದ್ದರು.ಅಂಗಡಿಯವರು ಜಾಹೀರಾತು ನೀಡಿದ್ದರು.
”ಬೇಕಾಗಿದ್ದಾರೆ,ಅಂಗಡಿಯಲ್ಲಿ ಸಿಹಿ ತಿಂಡಿ ಮಾರಾಟ ಮಾಡಲು ಜನ ಬೇಕಾಗಿದ್ದಾರೆ ಮಧುಮೇಹ ರೋಗಿಗಳಿಗೆ ಪ್ರಶಸ್ತ್ಯ ನೀಡಲಾಗುವುದು., ”

ಶಿಕ್ಷಕ : ಯಾವ ದ್ರವವನ್ನು ಬಿಸಿ ಮಾಡಿದರೆ ಘನವಸ್ತುವಾಗುತ್ತದೆ?ಯಾರು ಹೇಳ್ತೀರಿ?
ವಾಸು : ನಾನು ಹೇಳ್ತೀನಿ ಗುರುಗಳೆ.
ಶಿಕ್ಷಕ : ಹೇಳು.
ವಾಸು : ದ್ರವ ವಸ್ತು ಘನ ವಸ್ತುವಾಗುವುದು “ದೋಸೆ ಹಿಟ್ಟು” ಗುರುಗಳೆ.