ಮನೆ ಸ್ಥಳೀಯ ಎಂದಿನಂತೆ ಯುವಜನತೆಯಿಂದ ಜಗಮಗಗೊಂಡ ಯುವ ಸಂಭ್ರಮ

ಎಂದಿನಂತೆ ಯುವಜನತೆಯಿಂದ ಜಗಮಗಗೊಂಡ ಯುವ ಸಂಭ್ರಮ

0

ಮೈಸೂರು: ನಾಡ ಹಬ್ಬ ದಸರಾ ಪ್ರಯುಕ್ತ ನಡೆಯುವ ಯುವ ಸಂಭ್ರಮ ಕಾರ್ಯಕ್ರಮವು ನಗರದ ಮಾನಸ ಗಂಗೋತ್ರಿಯ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ 3 ನೇ ದಿನದ ಕಾರ್ಯಕ್ರಮದಲ್ಲಿ ಎಂದಿನಂತೆ ಕಿಕ್ಕಿರಿದ ಜನಸಾಗರದಿಂದ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಹ 57 ಕಲಾ ತಂಡಗಳಿಂದ ಕಾರ್ಯಕ್ರಮಗಳು ಅದ್ಧೂರಿಯಾಗಿ ಪ್ರದರ್ಶನಗೊಂಡಿತ್ತು.

Join Our Whatsapp Group

ಯುವ ಸಂಭ್ರಮದಲ್ಲಿ ತಿಲಕ್ ನಗರ ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಅಹಿಂದ ನಾಯಕ ಡಿ ದೇವರಾಜ್ ಅರಸ್ ಅವರ ಸಾಧನೆಯ ಬಗ್ಗೆ ಪ್ರದರ್ಶನ ಎಲ್ಲರ ಮನಸೆಳೆಯಿತು.

ಚಾಮರಾಜನಗರದ ವೈ ಎಂ ಮಲ್ಲಿಕಾರ್ಜುನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನವತಿಯಿಂದ ಮಹಾನ್ ದೇಶಭಕ್ತ ನಾಡ ಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರಿತು ಪ್ರದರ್ಶನ, ನಗರದ ಹುಣಸೂರ ತಾಲೂಕಿನ ವಿ. ಎಸ್. ಎಸ್.ಪ್ರಥಮ ದರ್ಜೆ ಕಾಲೇಜಿನಿಂದ ರಾಷ್ಟ್ರೀಯ ಭಾವೈಕ್ಯತೆ ವಿವಿಧತೆಯಲ್ಲಿ ಏಕತೆ ಹಾಗೂ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜುನಿಂದ ಸಂವಿಧಾನ ಮತ್ತು ಶಾಸನಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರದರ್ಶಿಸಿದರು.

ಯುವ ಸಂಭ್ರಮವೆಂದರೆ ಮನರಂಜನೆಯ ಕಾರ್ಯಕ್ರಮ ಈ ಮನರಂಜನೆಯಲ್ಲಿ ದಸರಾ ಪರಂಪರೆ, ಕರ್ನಾಟಕ ವೈಭವ, ಮರ್ಯಾದೆ ಪುರುಷೋತ್ತಮ ಶ್ರೀ ರಾಮನ ಚರಿತ್ರೆ, ಮಹಿಳಾ ಸಬಲೀಕರಣ, ಅನ್ನದಾತ ರೈತನ ದಿನಜೀವನದ ಬಗ್ಗೆ, ಭಾರತ ಸಂವಿಧಾನದ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ಅವರ ಜೀವನ ಕಥೆ, ಕನ್ನಡ ನಾಡು ನುಡಿ ಸಾಹಿತ್ಯ, ಭಾರತೀಯ ವೀರ ಯೋಧರ ತ್ಯಾಗ ಬಲಿದಾನ,ಮಹದೇಶ್ವರ ಜಾನಪದ ನೃತ್ಯ,ಸೇರಿದಂತೆ ಹಲವಾರು ಕಲಾ ತಂಡಗಳು ಮನರಂಜಿಸಿದರು.