ಮನೆ ರಾಜಕೀಯ ತೋರ್ಪಡಿಕೆಗೆ ಎಸಿಬಿ ದಾಳಿ ಮಾಡಿದರೇ ಪ್ರಯೋಜನವಿಲ್ಲ:  ಹೆಚ್.ಡಿ ಕುಮಾರಸ್ವಾಮಿ

ತೋರ್ಪಡಿಕೆಗೆ ಎಸಿಬಿ ದಾಳಿ ಮಾಡಿದರೇ ಪ್ರಯೋಜನವಿಲ್ಲ:  ಹೆಚ್.ಡಿ ಕುಮಾರಸ್ವಾಮಿ

0

ಬೆಂಗಳೂರು:  ಕೇವಲ ಜನರ ಕಣ್ಣೊರೆಸಲಷ್ಟೆ ದಾಳಿ ಸರಿಯಲ್ಲ.  ತೋರ್ಪಡಿಕೆಗೆ ದಾಳಿ ಮಾಡಿದರೇ ಪ್ರಯೋಜನ ಇಲ್ಲ. ಇತ್ತೀಚೆಗೆ ಎಸಿಬಿ ಅನೇಕ ಕಡೆ ದಾಳಿ ನಡೆಸಿದೆ.  ದಾಳಿ ಬಗ್ಗೆ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.ಅ

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು,  ಜನರು ಇಂದು ಹಣವಂತರಾಗಿದ್ದಾರೆ.  ಜನರಿಗೆ ಈಗ ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ.  ಈಗ ಧರ್ಮದ ಅವಶ್ಯಕತೆ ಇದೆ. ಜನ ಎಷ್ಟೇ ಬೆಲೆ ಏರಿದರೂ ಕೊಡಲು ಸಿದ್ಧರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಿ ವಿಚಾರ ಕುರಿತು ಪ್ರತಿಕ್ರಿಯಿಸಿ, ತಮಿಳುನಾಡಿನ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಸರ್ಕಾರ ಬದ್ಧತೆ ತೋರಿಸಬೇಕು. ನಮ್ಮ ನೀರನ್ನ ಪಡೆಯುವುದರಲ್ಲಿ ಅನ್ಯಾಯವಾಗಿದೆ. ಅದನ್ನ ರಾಜ್ಯ ಸರ್ಕಾರ ತ್ವರಿತ ಗತಿಯಲ್ಲಿ ಸರಿಪಡಿಸಬೇಕು ಎಂದರು.

ಹಿಂದಿನ ಲೇಖನದೇವಾಲಯ ನಿರ್ಮಾಣಕ್ಕಾಗಿ ಮುಸ್ಲೀಂ ಕುಟುಂಬದಿಂದ ಭೂಮಿ ದಾನ
ಮುಂದಿನ ಲೇಖನನಟ ಪುನೀತ್ ರಾಜ್‌ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ