ಮನೆ ರಾಜ್ಯ ಲಿಂಗಾಯಿತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಮಾಡಿ: ಚನ್ನಬಸವಾನಂದ ಸ್ವಾಮೀಜಿ

ಲಿಂಗಾಯಿತ ಪ್ರತ್ಯೇಕ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಮಾಡಿ: ಚನ್ನಬಸವಾನಂದ ಸ್ವಾಮೀಜಿ

0

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮವನ್ನು ಸಾಂವಿಧಾನಿಕ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಆಗ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮ ಮಾನ್ಯತೆಗೆ ಒಪ್ಪಿರಲಿಲ್ಲ. ಈಗ ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿಯೇ ಆಡಳಿತದಲ್ಲಿ ಇದೆ. ಹೀಗಾಗಿ ಸಿಎಂ ಬೊಮ್ಮಾಯಿ ಕೇಂದ್ರಕ್ಕೆ ಮತ್ತೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಅಂತಾ ಘೋಷಿಸಬೇಕು. ಕಲಬುರಗಿ ವಿವಿಗೆ ಬಸವೇಶ್ವರ ವಿವಿ ಅಂತಾ ಮರುನಾಮಕರಣ ಮಾಡಬೇಕು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ರೆ ಲಕ್ಷಾಂತರ ಲಿಂಗಾಯತ ಧರ್ಮೀಯರು ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾ. ನಾಗಮೋಹನದಾಸ್ ಸಮಿತಿ ವರದಿ ಶಿಫಾರಸು ಮಾಡುವಂತೆ ಆಗ್ರಹಿಸಿದ್ದು, ಈ ಹಿನ್ನೆಲೆ ಫೆ.20ರಂದು ಬೆಂಗಳೂರಿನ ಫ್ರೀಡಂಪಾರ್ಕ್’​ನಲ್ಲಿ ಬೃಹತ್ ಹೋರಾಟ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವವರಿಗೆ ನಮ್ಮ ಬೆಂಬಲ

ಧೈರ್ಯ ಇದ್ದರೇ ಪಂಚಾಚಾರ್ಯರು ವೀರಶೈವ ಅಂತ ಹೇಳಿಕೊಳ್ಳಲಿ. ಪಂಚಾಚಾರ್ಯರು ಯಾಕೆ ಲಿಂಗಾಯತ ಧರ್ಮಕ್ಕೆ ಗಂಟುಬಿದ್ದಿದ್ದಾರೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಎಲ್ಲಾ ಜಾತಿಗಳಿಗೆ ನೀಡುವ ಮೀಸಲಾತಿ ತೆಗೆದುಹಾಕಬೇಕು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವವರಿಗೆ ನಮ್ಮ ಬೆಂಬಲವಿದೆ ಎಂದರು.

ಕಾವಿಧಾರಿಗಳು ಬಿಜೆಪಿಗೆ ಸೀಮಿತವಾಗಿಲ್ಲ

ಹಿಂದೂ ಎಂಬುವುದು ಒಂದು ಧರ್ಮವಲ್ಲ, ಅದು ವರ್ಗಕ್ಕೆ ಸೀಮಿತವಲ್ಲ. ಭಾರತದಲ್ಲಿರುವ ಎಲ್ಲಾ ಧರ್ಮೀಯರು ಹಿಂದೂಗಳೇ. ಜೈನ, ಬೌದ್ಧ, ಶಿಖ್ ಧರ್ಮಕ್ಕೆ ನೀಡಿದಂತೆ ಪ್ರತ್ಯೇಕ ಧರ್ಮ ಬೇಕು. ಅದೇ ರೀತಿ ನಮಗೂ ಲಿಂಗಾಯತ ಪ್ರತ್ಯೇಕ ಧರ್ಮ ಬೇಕು. ಕಾವಿಧಾರಿಗಳು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ನಿಯಮಗಳಿಲ್ಲ. ಕಾವಿಧಾರಿಗಳು ಬಿಜೆಪಿಗೆ ಸೀಮಿತವಾಗಿಲ್ಲ ಎಂದು ಚನ್ನಬಸವ ಸ್ವಾಮೀಜಿ ಗುಡುಗಿದರು.

ಹಿಂದಿನ ಲೇಖನವಿಶ್ವಗುರುವಾಗಲು ಬುದ್ಧಿವಂತಿಕೆ ಅಗತ್ಯ: ಸುಬ್ರಮಣಿಯನ್ ಸ್ವಾಮಿ
ಮುಂದಿನ ಲೇಖನತುಮಕೂರಿನಲ್ಲಿ ಭೀಕರ ಅಪಘಾತ: ನವದಂಪತಿ ಸ್ಥಳದಲ್ಲೇ ಸಾವು