ಮನೆ ರಾಜಕೀಯ 40 % ಕಮಿಷನ್ ಆರೋಪ: ಸಾಕ್ಷಿ ನೀಡಿ ಮಾತನಾಡಿ ಎಂದ ನಳಿನ್ ಕುಮಾರ್ ಕಟೀಲ್

40 % ಕಮಿಷನ್ ಆರೋಪ: ಸಾಕ್ಷಿ ನೀಡಿ ಮಾತನಾಡಿ ಎಂದ ನಳಿನ್ ಕುಮಾರ್ ಕಟೀಲ್

0

ಮಂಗಳೂರು(Mangalore): ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಂದ ಶೇ.40 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಬಿಜೆಪಿ ಸಚಿವರ ಮೇಲೆ ಆರೋಪ ಮಾಡುವವರು ಸಾಕ್ಷಿ ಒದಗಿಸಿ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ಮಕ್ಕಳಿಗೆ ನೀಡುವ ಮೊಟ್ಟೆ ಯೋಜನೆಯಲ್ಲಿ ಕಾಂಗ್ರೆಸ್ಸಿಗರು ಹಣ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಜಯಮಾಲಾ ಅವರೇ ಹೇಳಿದ್ದಾರೆ. ಆಡಳಿತಾವಧಿಯಲ್ಲಿ ಶೇ 80ರಷ್ಟು ಕಮಿಷನ್ ಹೊಡೆದ, ನೆರೆ ಪರಿಹಾರ ನಿಧಿಯನ್ನೇ ಲೂಟಿ ಮಾಡಿದ ಕಾಂಗ್ರೆಸ್‌ಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.

ಈದ್ಗಾ ಮೈದಾನ ಸರ್ಕಾರದ ಸ್ವತ್ತು. ಸರ್ಕಾರಿ ಜಾಗಗಳಲ್ಲಿ ಎಲ್ಲಿ ಬೇಕಾದರೂ ಗಣೇಶೋತ್ಸವ ಆಚರಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಗಣೇಶೋತ್ಸವ ಆಚರಣೆಗೆ ಅರ್ಜಿ ಸಲ್ಲಿಸಿದರೆ, ಸರ್ಕಾರ ಅವಕಾಶ ನೀಡುತ್ತದೆ  ಎಂದರು.

ಹಿಂದಿನ ಲೇಖನಅಗ್ನಿ ಸ್ಟೀಲ್ಸ್ ಕಂಪನಿಯಲ್ಲಿದೆ ಉದ್ಯೋಗ: ಮೈಸೂರಿನಲ್ಲಿ ನಾಳೆ ಇಂಟರ್ ವ್ಯೂ
ಮುಂದಿನ ಲೇಖನಇಂದು ದೆಹಲಿಗೆ ತೆರಳುತ್ತಿರುವ ಬಿಎಸ್’ವೈ