ಮನೆ ಸುದ್ದಿ ಜಾಲ ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಕುರಿತ ಆರೋಪಗಳು ಸತ್ಯಕ್ಕೆ ದೂರ: ಡಾ.ಕೆ.ಆರ್.ಮಹೇಂದ್ರಪ್ಪ

ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಕುರಿತ ಆರೋಪಗಳು ಸತ್ಯಕ್ಕೆ ದೂರ: ಡಾ.ಕೆ.ಆರ್.ಮಹೇಂದ್ರಪ್ಪ

0

ಕೆ.ಆರ್.ನಗರ: ಪಟ್ಟಣದ ಸಿ.ಎಂ. ರಸ್ತೆಯಲ್ಲಿರುವ ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಇತರ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಂಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ ಹೇಳಿದರು.

Join Our Whatsapp Group


ನಗರದ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್‌ ರವರ ನೇತೃತ್ವದಲ್ಲಿ ಜೂನ್ ೨೨ರಂದು ಸಮಿತಿ ಸದಸ್ಯರೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣದಡಿಯಲ್ಲಿ ಈ ಹೋಟೆಲ್ ಮೇಲೆ ದಾಳಿ ಮಾಡಲಾಯಿತು. ಪುರಸಭೆ ಅಧಿಕಾರಿಗಳು ಮತ್ತು ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಡುಗೆ ಮನೆ ಸೇರಿದಂತೆ ಹೋಟೆಲ್‌ ನಲ್ಲಿ ಸ್ವಚ್ಚತೆ ಇರುವುದಿಲ್ಲ ಇದರ ಜತೆಗೆ ಫ್ರೀಜರ್‌ ನಲ್ಲಿ ಹಳೆ ಮಾಂಸ ಇದ್ದದ್ದು, ಕಂಡು ಬಂದಿತ್ತು ಈ ಬಗ್ಗೆ ಹೋಟೆಲ್‌ ನವರಿಗೆ ಎಚ್ಚರಿಕೆ ನೀಡಿ ೬೪೦೦ ರೂಗಳನ್ನು ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೋಟೆಲ್‌ ನಲ್ಲಿ ದನದ ಮಾಂಸ ಮತ್ತು ನಾಯಿ ಮಾಂಸ ಇರುವುದಿಲ್ಲ ಆದರೂ ಸಾಮಾಜಿಕ ಜಾಲ ತಾಣಗಳು ಮತ್ತು ಯೂಟೂಬ್ ಚಾನೆಲ್‌ ಗಳಲ್ಲಿ ಈ ರೀತಿಯ ಸುಳ್ಳು ಸುದ್ದಿ ಹರಿದಾಡಿದೆ ಅದಕ್ಕಾಗಿ ಈ ಸ್ಪಷ್ಪನೆ ನೀಡುತ್ತಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ?:  ಜೂನ್ ೨೨ರಂದು ನಡೆದ ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಮೇಲಿನ ದಾಳಿಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಆರ್.ಮಹೇಂದ್ರಪ್ಪ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿದೆ. ದಾಳಿಯ ವೇಳೆ ವಶಪಡಿಸಿಕೊಂಡ ಮಾಂಸವನ್ನು ಸಿಎಫ್‌ ಟಿಆರ್‌ ಐನಲ್ಲಿ ಪರೀಕ್ಷೆಗೆ ಒಳಪಡಿಸಿ ಅದರ ವರದಿಯನ್ನು ಪಡೆಯದೆ ಕಳೆದ ತಿಂಗಳು ನಡೆಸಿರುವ ದಾಳಿಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರೆಸ್ಟೋರೆಂಟ್‌ ನಲ್ಲಿ ದನದ ಹಾಗೂ ನಾಯಿ ಮಾಂಸಗಳನ್ನು ಬಳಸುತ್ತಿದ್ದರು ಎಂದು ಆರೋಗ್ಯಾಧಿಕಾರಿಗಳು ಅಂದು ಹೇಳಿಕೆ ನೀಡಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ರೀತಿ ಹರಿದಾಡಿತ್ತು. ಗಣೀಸ್ ರೆಸ್ಟೋರೆಂಟ್‌ ನವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಬೇಕಿತ್ತು. ಹಾಗೂ ಜೂನ್ ೨೨ ರಂದು ಹಲವು ಹೋಟೆಲ್‌ ಗಳ ಮೇಲೆ ದಾಳಿಯಾಗಿದ್ದು ಪತ್ರಿಕಾಗೋಷ್ಠಿಯಲ್ಲಿ ಗಣೀಸ್ ಹೊಟೇಲ್ ಬಗ್ಗೆ ಮಾತ್ರ ಸ್ಪಷ್ಟನೆ ನೀಡಿರುವ ಆರೋಗ್ಯಾಧಿಕಾರಿಗಳ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಹಿಂದಿನ ಲೇಖನಬಹುನಿರೀಕ್ಷಿತ ‘ಸಲಾರ್’ ಸಿನಿಮಾದ ಟೀಸರ್ ರಿಲೀಸ್
ಮುಂದಿನ ಲೇಖನ1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೂರನೇ ಶನಿವಾರ ಬ್ಯಾಗ್ ರಹಿತ ದಿನ