ಮನೆ Uncategorized ಪ್ರಶ್ನೆ ಪತ್ರಿಕೆಯೊಂದರ ಉತ್ತರ

ಪ್ರಶ್ನೆ ಪತ್ರಿಕೆಯೊಂದರ ಉತ್ತರ

0

ಪ್ರಶ್ನೆ:- ಹದಿನೈದು ಹಣ್ಣುಗಳ ಹೆಸರು ಬರೆಯಿರಿ?

ಉತ್ತರ :- ಮೂಸಂಬಿ, ಕಲ್ಲಂಗಡಿ, ಆಪಲ್ ಮತ್ತು ಒಂದು ಡಜನ್ ಬಾಳೆಹಣ್ಣು

*************

ಪ್ರಶ್ನೆ:- ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ?

ಉತ್ತರ : – ಪ್ರಪಂಚದಲ್ಲಿ ಇರೋದು ಒಂದೇ ದೇಶ, ಅದು ಭಾರತ… ಮಿಕ್ಕಿದ್ದೆಲ್ಲಾ ವಿದೇಶ.

***************

ಪ್ರಶ್ನೆ:- ವಾಸ್ಕೋಡಿಗಾಮ ಭಾರತಕ್ಕೆ ಯಾಕೆ ಬಂದ?

 ಉತ್ತರ :- ನನ್ನ ಫೇಲ್ ಮಾಡೋಕ್ಕೆ

***************

ಪ್ರಶ್ನೆ:- ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು?

ಉತ್ತರ : – ಇಡ್ಲಿ, ದೋಸೆ

**************

ಪ್ರಶ್ನೆ:- 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ತು?

ಉತ್ತರ : – ಗೆದ್ದವರಿಗೆ

***************

ಪ್ರಶ್ನೆ:- ಕ್ರಿಕೆಟ್ ಬಗ್ಗೆ ಅತೀ ಚಿಕ್ಕದಾದ ಒಂದು ಪ್ರಬಂಧ ಬರೆಯಿರಿ

ಉತ್ತರ :- ಮಳೆ ಬಂದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಗಿದೆ

**************

ಪ್ರಶ್ನೆ:- ಮಹಾತ್ಮ ಗಾಂಧೀಜಿ ಸಾಯದೇ ಇದ್ದಿದ್ದರೆ?

ಉತ್ತರ :- ಬಹುಶಃ ಈಗಲೂ ಬದುಕಿರುತ್ತಿದ್ದರು.

***************

ಪ್ರಶ್ನೆ:- ಕ್ಲೋರೈಡ್ ಅನ್ನು ಕಾಯಿಸಿದಾಗ ಏನಾಗುತ್ತದೆ?

ಉತ್ತರ :- ಬಿಸಿಯಾಗುತ್ತೆ

***************

ಪ್ರಶ್ನೆ:- ಮೊಘಲರು ಎಲ್ಲಿಯವರೆಗೆ ರಾಜ್ಯಭಾರ ಮಾಡಿದರು?

ಉತ್ತರ :- ಚರಿತ್ರೆ ಪುಸ್ತಕದಲ್ಲಿ 3ನೇ ಪಾಠದ 15ನೇ ಪುಟದಿಂದ 20ನೇ ಪುಟಗಳವರೆಗೆ

******************

ಪ್ರಶ್ನೆ:- ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ?

ಉತ್ತರ :-ಸ್ನಾನ ಮಾಡೋವಾಗ ಶಾಕ್ ಹೊಡೆಯುತ್ತೆ ಅಂತ!

******************

ಪ್ರಶ್ನೆ:- ಮಾತು ಬರದವರನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?

ಉತ್ತರ :- ಹೇಗೆ ಬೇಕಾದರೂ ಕರೆಯಬಹುದು, ಏಕೆಂದರೆ ಅವರಿಗೆ ಕೇಳಿಸಲ್ಲ.

ಟೀಚರ್ : ಪಾಠ ಕೆಳೋದು ಬೀಟ್ಟು ಕ್ಲಾಸ್ ಅಲ್ಲೀ ಬರೀ ಹುಡ್ಗಿರ್ ಜೊತೆ ಮತಾಡ್ತೀಯಲ್ಲ ಯಾಕೊ?

ಗುಂಡ: ನಾನು ಬಡವ ಟೀಚರ್ ಫೋನೀಲ್ಲ, ಇಂಟರ್ನೆಟ್ ಇಲ್ಲ….

ಹಿಂದಿನ ಲೇಖನಯುವಕರು `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆಂದೋಲನ ಆರಂಭಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ
ಮುಂದಿನ ಲೇಖನ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ: ಜನವರಿ 6, 7 ಮತ್ತು 8 ರಂದು ಹಾವೇರಿಯಲ್ಲಿ ಸಮ್ಮೇಳನ