ಮನೆ ಅಪರಾಧ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ: ನಗರಸಭಾ ಸದಸ್ಯನ ವಿರುದ್ಧ ದೂರು ದಾಖಲು

ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ: ನಗರಸಭಾ ಸದಸ್ಯನ ವಿರುದ್ಧ ದೂರು ದಾಖಲು

0

ಹುಣಸೂರು(Hunsuru): ಕರ್ತವ್ಯ ನಿರತ ಪೊಲೀಸ್‌ ಹೆಡ್ ಕಾನ್ಸ್ ಟೇಬಲ್‌ಗೆ ಬೆದರಿಕೆ ಮತ್ತು ಹಲ್ಲೆ ಆರೋಪದಡಿ ಹುಣಸೂರು ನಗರಸಭೆ ಸದಸ್ಯನ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರು ನಗರಸಭೆ ಮೈದಾನದಲ್ಲಿ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ವೇಳೆ ಆಯೋಜಕರ ಮನವಿಯಂತೆ ಸಾರ್ವಜನಿಕರನ್ನು ಅಂಕಣದಿಂದ ಹೊರಗೆ ಹೋಗಲು ಹೆಡ್ ಕಾನ್ಸಟೇಬಲ್ ಮಹೇಶ್ ಹೇಳಿದ್ದರು.

ಈ ಸಂದರ್ಭದಲ್ಲಿ ಹೆಡ್ ಕಾನ್ಸ್ ಟೇಬಲ್ ಮಹೇಶ್ ಅವರು ಹುಣಸೂರು ನಗರಸಭೆಯ 17 ನೇ ವಾಡ್ ೯ ಸದಸ್ಯ ಮನುವನ್ನು ಕ್ರೀಡಾಂಗಣದಿಂದ ಹೊರ ಹೋಗಲು ಸೂಚಿಸಿದ್ದರು. ಈ ವೇಳೆ ಮನು ಏಕವಚನದಲ್ಲಿ ಕೂಗಾಡಿದ್ದ ನಂತರ ಮಹೇಶ್‌ರನ್ನು ಎಳೆದಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ನಗರಸಭೆ ಸದಸ್ಯ ಮನು ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಂದ ಪತಿ
ಮುಂದಿನ ಲೇಖನಡಾ.ರಾಜ್‌ ಕುಮಾರ್‌ ಕುಟುಂಬ ಸದಸ್ಯರಿಂದ ಸಿಎಂ ಬೊಮ್ಮಾಯಿ ಭೇಟಿ