ಮನೆ ರಾಷ್ಟ್ರೀಯ ಮಧ್ಯಮ ವರ್ಗದ ಕಷ್ಟದ ಬಗ್ಗೆ ಅರಿವಿದೆ: ನಿರ್ಮಲಾ ಸೀತಾರಾಮನ್‌

ಮಧ್ಯಮ ವರ್ಗದ ಕಷ್ಟದ ಬಗ್ಗೆ ಅರಿವಿದೆ: ನಿರ್ಮಲಾ ಸೀತಾರಾಮನ್‌

0

ನವದೆಹಲಿ: ನಾನೂ ಸಹ ಮಧ್ಯಮವರ್ಗದಿಂದಲೇ ಬಂದವರಾಗಿರುವುದರಿಂದ ಮಧ್ಯಮ ವರ್ಗದ ಜನತೆ ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಸಂವೇದನಾಶೀಲರಾಗಿದ್ದೇವೆಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಆರ್‌ಎಸ್‌ಎಸ್ ಮುಖವಾಣಿ ಪಾಂಚಜನ್ಯ ಪ್ರಕಟಣೆಯ 75ನೇ ವರ್ಷದ ನಿಮಿತ್ತ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ 2023–24ನೇ ಸಾಲಿನ ಕೇಂದ್ರ ಬಜೆಟ್‌ನ ಕುರಿತು ಮಾತನಾಡಿದ ಅವರು, ಮಧ್ಯಮ ವರ್ಗದ ಮೇಲಿರುವ ಒತ್ತಡದ ಬಗ್ಗೆ ನನಗೆ ಅರಿವಿದೆ. ಈವರೆಗೆ ನಮ್ಮ ಸರ್ಕಾರ ಅವರ ಮೇಲೆ ಯಾವುದೇ ತೆರಿಗೆಯ ಹೊರೆ ಹೊರಿಸಿಲ್ಲ. 5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಇದೆ ಎಂದಿದ್ದಾರೆ.

ಅಲ್ಲದೇ ತಮ್ಮ ಸರ್ಕಾರವು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಲು ಸಜ್ಜಾಗಿದೆ ಎನ್ನುವ ಭರವಸೆಯನ್ನೂ ನೀಡಿದ್ದಾರೆ.

ಮಧ್ಯಮ ವರ್ಗದ ಜನರ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಅವರಿಗೆ ಸರ್ಕಾರ ತುಂಬಾ ಅನುಕೂಲಗಳನ್ನು ಮಾಡಿಕೊಟ್ಟಿದೆ. ಅದನ್ನು ಮುಂದುವರಿಸಲಿದೆ ಎಂದು ಹೇಳಿರುವ ಅವರು, ಈ ಬಜೆಟ್‌ನಲ್ಲಿ ಮಾಧ್ಯಮ ವರ್ಗದವರಿಗೆ ಯಾವ ಅನುಕೂಲಗಳು ಸಿಗಲಿದೆ ಎನ್ನುವುದನ್ನು ಹೇಳಿಲ್ಲ.‌ನಮ್ಮ ಸರ್ಕಾರವು 27 ನಗರಗಳಲ್ಲಿ ಮೆಟ್ರೋ ರೈಲು ಯೋಜನೆಯ ಅಭಿವೃದ್ಧಿಗೆ ಹಲವು ಹೆಜ್ಜೆಗಳನ್ನು ತೆಗೆದುಕೊಂಡಿದೆ. ಜನ ಜೀವನ ಸುಲಭವಾಗಿಸಲು 100 ಸ್ಮಾರ್ಟ್‌ ಸಿಟಿಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಹಿಂದಿನ ಲೇಖನಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ‘ಆರ್‌’ಆರ್‌’ಆರ್’
ಮುಂದಿನ ಲೇಖನವಯಾಕಾಮ್‌ 18 ಪಾಲಾದ ಮಹಿಳಾ ಐಪಿಎಲ್ ಪ್ರಸಾರದ ಹಕ್ಕು