ಮನೆ ರಾಜ್ಯ ಆಜಾದಿ ಕಾ ಅಮೃತ ಮಹೋತ್ಸವ: ಆ.14 ರಂದು ‘ಸ್ವಾತಂತ್ರ್ಯದ ಓಟ’

ಆಜಾದಿ ಕಾ ಅಮೃತ ಮಹೋತ್ಸವ: ಆ.14 ರಂದು ‘ಸ್ವಾತಂತ್ರ್ಯದ ಓಟ’

0

ಮೈಸೂರು(Mysuru): ‘ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ಮೈಸೂರು ಅಥ್ಲೆಟಿಕ್ಸ್‌ ಕ್ಲಬ್‌ ವತಿಯಿಂದ  ‘ಸ್ವಾತಂತ್ರ್ಯದ ಓಟ–75’ ನ್ನು ಆ.14ರಂದು ಬೆಳಿಗ್ಗೆ 7ಕ್ಕೆ ವಿಶ್ವವಿದ್ಯಾಲಯದ ಓವಲ್‌ ಮೈದಾನದಲ್ಲಿ ಆಯೋಜಿಸಲಾಗಿದೆ.

ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ–ಸ್ನಾತಕೋತ್ತರ ಪದವಿ ಓದುತ್ತಿರುವವರಿಗೆ  ಮೂರು ವಿಭಾಗಗಳಲ್ಲಿ ಓಟದ ಸ್ಪರ್ಧೆ ನಡೆಯಲಿದೆ.

ಬಾಲಕಿಯರಿಗೆ 3 ಕಿ.ಮೀ., ಬಾಲಕರಿಗೆ 5 ಕಿ.ಮೀ. ಓಟ ನಿಗದಿಪಡಿಸಲಾಗಿದೆ. ಮೂರು ವಿಭಾಗಗಳಲ್ಲಿ ಮೊದಲ ಬಹುಮಾನ ₹ 1,000, ದ್ವಿತೀಯ ಬಹುಮಾನ ₹ 750 ಹಾಗೂ ತೃತೀಯ ಬಹುಮಾನ ₹ 500 ಜೊತೆಗೆ ಪದಕ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು.

ಓಟ ಪೂರ್ಣಗೊಳಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಎಲ್ಲರಿಗೂ ಪ್ರವೇಶ ಉಚಿತವಾಗಿರಲಿದೆ.

ಆಸಕ್ತರು ತಮ್ಮ ಗುರುತಿನ ಚೀಟಿ ಅಥವಾ ಪ್ರಾಂಶುಪಾಲರಿಂದ ಪಡೆದ ಪತ್ರದೊಂದಿಗೆ ಆ.13ರ ಸಂಜೆ 4ರಿಂದ 7ರ ಒಳಗೆ ಓವಲ್‌ ಮೈದಾನದ ಲಯನ್ಸ್‌ ಹಾಲ್‌ಗೆ ಬಂದು ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9448046667 (ಯೋಗೇಂದ್ರ), 9845231243 (ಮುರಳೀಧರ್‌), 9751971978 (ಜಿ.ಪ್ರಭಾಕರ್) ಸಂರ್ಕಿಸಬಹುದು.

ಹಿಂದಿನ ಲೇಖನರೆಪೊ ದರ ಹೆಚ್ಚಿಸಿದ ಆರ್’ಬಿಐ
ಮುಂದಿನ ಲೇಖನ2023ರಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ: ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ