ಮನೆ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿ: ಕಾಂಗ್ರೆಸ್‌ ಕಿಡಿ

ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿ: ಕಾಂಗ್ರೆಸ್‌ ಕಿಡಿ

0

ಬೆಂಗಳೂರು (Bengaluru)- ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿಯಾಗಿಬಿಟ್ಟಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಟಿಪ್ಪು ಕುರಿತು ಬಿಜೆಪಿ ಮಾಡಿದ್ದ ಟ್ವೀಟ್‌ ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ಗೋಡ್ಸೆಯನ್ನು ಪೂಜಿಸುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವುದು ಬಿಜೆಪಿಗರ ಖಯಾಲಿಯಾಗಿಬಿಟ್ಟಿದೆ. ಬ್ರಿಟೀಷರ ವಿರುದ್ಧ ಹೋರಾಡಿದವರಿಗೆ ಅವಮಾನ, ಬ್ರಿಟೀಷರಿಂದ ಪಿಂಚಣಿ ಪಡೆದವರಿಗೆ ಸನ್ಮಾನ ಇದೇ ಬಿಜೆಪಿಯ ನಿಲುವು ಎಂದು ಟೀಕಿಸಿದೆ.

#ದೇಶದ್ರೋಹಿಬಿಜೆಪಿ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಬ್ರಿಟೀಷರ ಪಾಲಿನ ಸಿಂಹಸ್ವಪ್ನವಾಗಿದ್ದ ಟಿಪ್ಪುವಿನ ಬಗ್ಗೆ ಬ್ರಿಟೀಷರೇ ಬರೆದ ಅನೇಕ ಪುಸ್ತಕಗಳಿವೆ. ಬಿಜೆಪಿಗರು ಅದನ್ನು ಕೊಂಡು ಓದುವುದು ಒಳಿತು. ಅಷ್ಟೂ ಸಾಲದಿದ್ದರೆ ಮೈಸೂರು ಭಾಗದಲ್ಲಿ ಇವತ್ತಿಗೂ ಟಿಪ್ಪುವಿನ ಬಗ್ಗೆ ಜನಪದರು ಕಟ್ಟಿದ ಲಾವಣಿಗಳು ಪ್ರಸ್ತುತವಾಗಿವೆ ಅದನ್ನು ಕೇಳಿಸಿಕೊಳ್ಳುವುದು ಒಳ್ಳೆಯದು ಎಂದಿದೆ.

ಬಿಜೆಪಿ ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ‘ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ “ಜಾಣಕುರುಡುತನ ಮತ್ತು ಜಾಣಕಿವುಡುತನ” ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ ಎಂದು ಟ್ವೀಟ್‌ ಮಾಡಿತ್ತು.

ಹಿಂದಿನ ಲೇಖನಬೀದಿ ಪೋಕರಿಯೊಬ್ಬ ನಾಡಿನ ಮಕ್ಕಳು ಏನು ಕಲಿಯಬೇಕೆಂದು ನಿರ್ಧರಿಸುವುದು ಕರ್ನಾಟಕದ ದೌರ್ಭಾಗ್ಯ: ಕಾಂಗ್ರೆಸ್‌ ಕಿಡಿ
ಮುಂದಿನ ಲೇಖನಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕ, ಪೂಜೆಗೆ ಅನುಮತಿ ಕೋರಿ ಅರ್ಜಿ: ಜುಲೈ 1ಕ್ಕೆ ವಿಚಾರಣೆ