ಮನೆ ಅಪರಾಧ ಮೈಸೂರು: ತಾಳಿ ಕಟ್ಟುವಾಗ ಮದುವೆ ಬೇಡವೆಂದು ವಧುವಿನ ಹೈಡ್ರಾಮ

ಮೈಸೂರು: ತಾಳಿ ಕಟ್ಟುವಾಗ ಮದುವೆ ಬೇಡವೆಂದು ವಧುವಿನ ಹೈಡ್ರಾಮ

0

ಮೈಸೂರು(Mysuru): ತಾಳಿ ಕಟ್ಟುವ ಶುಭ ಸಮಯದಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಘಟನೆ ಮೈಸೂರಿನ ವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಮೈಸೂರಿನ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್ ಡಿ ಕೋಟೆಯ ಯುವಕನ ಜೊತೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ. 

ವಧು ಸಿಂಚನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದಕ್ಕೆ ಕಾರಣ ಸಿಂಚನ ಪ್ರಿಯಕರ ತನ್ನ ಪ್ರಿಯತಮೆಯನ್ನು ನೀನು ಮದುವೆಯಾಗಬೇಡ ಎಂದು ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ವರನ ಕಡೆಯವರು ವಧುವನ್ನು ಪ್ರಶ್ನಿಸಿದ್ದಾರೆ.  ನಂತರ ಮದುವೆಗೆ ಖರ್ಚು ಮಾಡಿದ್ದ 5 ಲಕ್ಷ ರೂಪಾಯಿ ಹಣವನ್ನು ಕಟ್ಟಿಕೊಡುವಂತೆ ಆಗ್ರಹಿಸಿ ವರನ ಕಡೆಯವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇನ್ನು ಕೆಆರ್ ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯವಾಗಿದ್ದು, ಮದುವೆಗೆ ಖರ್ಚು ಮಾಡಿದ್ದ ಹಣವನ್ನು ಕೊಡಲು ವಧುವಿನ ಕಡೆಯವರು ಒಪ್ಪಿ, ಹಣ ನೀಡಿದ್ದಾರೆ.

ಹಿಂದಿನ ಲೇಖನಪಿಎಸ್‌ ಐ ಹಗರಣ: ಯಾವುದೇ ಮಾಹಿತಿ ಬಾಯಿಬಿಡದ ಡಿವೈಎಸ್ಪಿ ಶಾಂತಕುಮಾರ್‌
ಮುಂದಿನ ಲೇಖನಸೋಮವಾರದ ದಿನ ಭವಿಷ್ಯ