ಮನೆ ಕೃಷಿ ಕೇಂದ್ರ ಸರ್ಕಾರ ರೈತರನ್ನು ಬಲಿಕೊಡಬಾರದು: ಕುರುಬೂರು ಶಾಂತಕುಮಾರ್

ಕೇಂದ್ರ ಸರ್ಕಾರ ರೈತರನ್ನು ಬಲಿಕೊಡಬಾರದು: ಕುರುಬೂರು ಶಾಂತಕುಮಾರ್

0

ಮೈಸೂರು(Mysuru): ಪ್ರಸ್ತುತ ದಿನಗಳಲ್ಲಿ ಬೇರೆ ಬೇರೆ ದೇಶಗಳಿಗೆ ಆಹಾರ ದಾನ ಮಾಡುತ್ತಿದ್ದೇವೆ. ಇದನ್ನು ಮರೆತು ಕೇಂದ್ರ ಸರ್ಕಾರ ರೈತರನ್ನು ಬಲಿಕೊಡುವ ಕಾರ್ಯಕ್ಕೆ ಮುಂದಾಗಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ಗ್ರಾಮ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದ ಜನರ ಆಹಾರಕ್ಕಾಗಿ ಅಮೇರಿಕಾ ದೇಶದ ಗೋಧಿಯನ್ನು ಭಿಕ್ಷೆ ಬೇಡುತ್ತಿದ್ದ ಕಾಲ ಹೋಗಿ ಇಂದು 300 ಲಕ್ಷ ಮಿಲಿಯನ್ ಟನ್ ಆಹಾರ ರೈತರ ಶ್ರಮದಿಂದ ಬೆಳೆಯುತ್ತಿದ್ದೇವೆ ಇದನ್ನು ಕೇಂದ್ರ ಸರ್ಕಾರ ಮರೆಯಬಾರದು ಎಂದರು.

ರೈತ ಬೆಳೆದ ಬತ್ತ ಕಬ್ಬು ಇನ್ನಿತರ ಬೆಳೆಗಳಿಗೆ ಭಿಕ್ಷೆ ರೂಪದಲ್ಲಿ ದರ ಏರಿಕೆ ಮಾಡುವ ಎಂಎಲ್ಎ, ಮಂತ್ರಿಗಳಿಗೆ, ಸಂಬಳವನ್ನು ಯಾವುದೇ ಚರ್ಚೆಯಿಲ್ಲದೆ ಮನಬಂದಂತೆ ಏರಿಕೆ ಮಾಡುತ್ತಾ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ರೂಪಿಸುತ್ತಾ ರೈತರ ಸಮಾಧಿ ಕಟ್ಟಲು ಯೋಜನೆಗಳನ್ನು ರೂಪಿಸುತ್ತಿವೆ. ಇಂತಹ ಕಾರ್ಯದಿಂದಲೇ  ಶ್ರೀಲಂಕಾದಲ್ಲಿ ಜನರು ದಂಗೆ ಎದ್ದು ಪ್ರಧಾನಿ ಮನೆಗೆ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದಾರೆ, ಎಂಬುದನ್ನು ಇಲ್ಲಿನ ಸರ್ಕಾರಗಳು ಅರಿತುಕೊಳ್ಳಬೇಕು ಎಂದು ಎಚ್ಚರಿಸಿದರು.

ರಸಗೊಬ್ಬರ ಬೆಲೆ 850ರಿಂದ 1700ಕೆ  ಸೂರ್ಯಕಾಂತಿ ಬಿತ್ತನೆ ಬೀಜದ ಬೆಲೆ 1100ರಿಂದ 2300 ಕೆ ಡೀಸೆಲ್ ಬೆಲೆ ಕೀಟನಾಶಕ ಬೆಲೆ ಮನೆ ಬಳಸುವ ಗ್ಯಾಸ್ ಬೆಲೆ ಎಲ್ಲವನ್ನು ಏರಿಕೆಯಾಗಿದೆ. ರೈತನ ಉತ್ಪಾದನ ವೆಚ್ಚ ಏರಿಕೆಯಾಗಿದೆ ಆದರೆ ರೈತನ ಉತ್ಪನ್ನದ ಬೆಲೆ ಮಾತ್ರ ಕುಸಿಯುತ್ತಿದೆ ಎಂದು ಬೇಸರಿಸಿದ ಅವರು, ಈ ಬಗ್ಗೆ ಯಾವುದೇ ಎಂಎಲ್ಎ, ಮಂತ್ರಿಗಳು ಮಾತನಾಡುವುದಿಲ್ಲ. ರೈತರು ಜಾಗೃತರಾಗಿ ಎಚ್ಚರಿಕೆಯಾಗದಿದ್ದರೆ ತನ್ನ ಗುಲಾಮರಾಗಿ ಮಾಡುತ್ತಾರೆ ಎಂದು ಹೇಳಿದರು.

ಭೂ ಮಾಫಿಯಾ ಸರ್ಕಾರಿ ಜಮೀನು ನುಂಗುವ ಖದೀಮರು ಹಣ ಬಲದಿಂದ ವಾಮಮಾರ್ಗಗಳನ್ನು ಬಳಸಿ ಎಂಎಲ್ಎ ಮಂತ್ರಿಗಳು ಆಗುತ್ತಿದ್ದಾರೆ ಇವರು ಕಾನೂನುಗಳನ್ನು ಗಾಳಿಗೆ ತೂರಿ ದಂಧೆ ನಡೆಸುತ್ತಿದ್ದಾರೆ ಅದಕ್ಕಾಗಿ ರೈತರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ರೈತ ಮುಖಂಡರುಗಳಾದ ಅತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್,  ವಾಟಾಳ್ ಪುರದ ನಾಗೇಶ್,  ಶಂಭುಲಿಂಗಪ್ಪ, ಚಿನ್ನಸ್ವಾಮಿ ಸುರೇಶ್ ಶಿವಕುಮಾರಸ್ವಾಮಿ, ಹಾಡ್ಯರವಿ, ಬರಡನಪುರ ನಾಗರಾಜ್ ಇದ್ದರು.

ಹಿಂದಿನ ಲೇಖನಪಠ್ಯಪುಸ್ತಕದಿಂದ ಭಗತ್‌ ಸಿಂಗ್‌ ಗದ್ಯ ಕೈಬಿಟ್ಟಿಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ
ಮುಂದಿನ ಲೇಖನಹಂಗಾಮಿ ಉಪಸಭಾಪತಿಯಾಗಿ ರಘುನಾಥ್‌ ಮಲಕಾಪುರೆ ನೇಮಕ