ಮನೆ ರಾಜ್ಯ ಚಾಮುಂಡಿಬೆಟ್ಟ: ಪ್ಯಾಕ್ ಮಾಡಿದ ತೆಂಗಿನ ಕಾಯಿ ನೀರು ಪ್ರಸಾದವಾಗಿ ವಿತರಣೆಗೆ ಸಿದ್ದತೆ

ಚಾಮುಂಡಿಬೆಟ್ಟ: ಪ್ಯಾಕ್ ಮಾಡಿದ ತೆಂಗಿನ ಕಾಯಿ ನೀರು ಪ್ರಸಾದವಾಗಿ ವಿತರಣೆಗೆ ಸಿದ್ದತೆ

0

ಮೈಸೂರು(Mysuru):  ಶೀಘ್ರದಲ್ಲೇ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಸ್ಥಾನದ ಭಕ್ತರು ದೇವರಿಗೆ ಅರ್ಪಿಸುವ ತೆಂಗಿನಕಾಯಿಯ ನೀರನ್ನು ಪ್ರಸಾದವಾಗಿ ನೀಡಲು ಸಿದ್ದತೆ ನಡೆಸಲಾಗುತ್ತಿದೆ.

ದೇವಾಲಯದ ಆವರಣದಲ್ಲಿ ತೆಂಗಿನ ನೀರು ಸಂಗ್ರಹಣೆ, ಶುದ್ಧೀಕರಣ ಮತ್ತು ಪ್ಯಾಕೇಜಿಂಗ್ ಘಟಕವನ್ನು ಸ್ಥಾಪಿಸಲು ಚಾಮುಂಡೇಶ್ವರಿ ದೇವಾಲಯದ ಅಧಿಕಾರಿಗಳು ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ – ತಂಜಾವೂರು(NIFTEM – T) ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಈ ತೆಂಗಿನ ನೀರಿನ ಘಟಕವು, ಕೈಯಿಂದ ತೆಂಗಿನಕಾಯಿ ಒಡೆಯುವ, ನಿರಂತರ ಫಿಲ್ಟರ್ ಮಾಡುವ ಮತ್ತು ನಾನ್-ಥರ್ಮಲ್ UV -C ಕ್ರಿಮಿನಾಶಕ ವ್ಯವಸ್ಥೆ, ಬೃಹತ್ ಚಿಲ್ಲಿಂಗ್ ಟ್ಯಾಂಕ್‌ಗಳು ಮತ್ತು ಸ್ವಯಂಚಾಲಿತವಾಗಿ ಕಪ್ ಗೆ ನೀರು ತುಂಬುವ ಘಟಕವನ್ನು ಹೊಂದಿರುವ ಸಾಧನವಾಗಿದೆ.

ಮುಜರಾಯಿ ಇಲಾಖೆಯ ಅತಿ ಹೆಚ್ಚು ಆದಾಯವನ್ನು ಗಳಿಸುವ ದೇವಾಲಯಗಳಲ್ಲಿ ಚಾಮುಂಡೇಶ್ವರಿ ದೇವಾಲಯವು ಒಂದಾಗಿದೆ. ಈ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಹೆಚ್ಚಿನ ಭಕ್ತರು ದೇವಾಲಯದ ಹೊರಗೆ ನಿಗದಿತ ಸ್ಥಳದಲ್ಲಿ ತೆಂಗಿನಕಾಯಿಯನ್ನು ಒಡೆಯುವುದರಿಂದ ತಾಜಾ ತೆಂಗಿನಕಾಯಿ ನೀರು ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ದೇವಸ್ಥಾನದ ಆವರಣದಲ್ಲಿ ತೆಂಗಿನ ನೀರಿನ ಘಟಕವನ್ನು ಸ್ಥಾಪಿಸಲು ದೇವಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಹಿಂದಿನ ಲೇಖನನೆರೆಮನೆಯ ಮಹಿಳೆಗೆ ಹೊಡೆದ ಆರೋಪಿಗೆ 7 ವರ್ಷ ಜೈಲು: ಮಹತ್ವದ ತೀರ್ಪು ನೀಡಿದ ಹೈಕೋರ್ಟ್
ಮುಂದಿನ ಲೇಖನವಿಸ್ಮಯಾ ವರದಕ್ಷಿಣೆ ಸಾವು: ಪತಿ ಕಿರಣ್ ಕುಮಾರ್ ತಪ್ಪಿತಸ್ಥ ಎಂದು ಕೇರಳ ನ್ಯಾಯಾಲಯ ತೀರ್ಪು