ಮನೆ ಅಪರಾಧ ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಕೊಂದ ಪುತ್ರನ ಬಂಧನ

ಚಿಕ್ಕಮಗಳೂರು: ಹೆತ್ತ ತಾಯಿಯನ್ನೇ ಕೊಂದ ಪುತ್ರನ ಬಂಧನ

0

ಚಿಕ್ಕಮಗಳೂರು(chikkamagaluru):  ಹಣಕಾಸಿನ ವಿಚಾರಕ್ಕಾಗಿ ಹೆತ್ತ ತಾಯಿಯನ್ನೇ ಕೊಂದ ಪುತ್ರನನ್ನು ಪೊಲೀಸರು ಬಂಧಿಸಿರುವ ಘಟನೆ ಹಚ್ಚಡಮನೆ ಗ್ರಾಮದಲ್ಲಿ ನಡೆದಿದೆ.

ಲತಾ ಮೃತ ಮಹಿಳೆ. ಪುತ್ರ ಬಸವರಾಜ್ ಬಂಧಿತ ಆರೋಪಿ.

ಬಸವರಾಜ್ ತನ್ನ ತಾಯಿ ಲತಾ  ಅವರ ತಲೆಗೆ ಒಲೆ ಊದುವ ಕೊಳವೆಯಿಂದ  ಹೊಡೆದು ಕೊಂದಿದ್ದಾನೆ. ಬಳಿಕ ತಾಯಿಯ ಮೃತದೇಹವನ್ನು ಡೀಸೆಲ್ ಹಾಕಿ ಸುಟ್ಟು ಹಾಕಿದ್ದ ಬಸವರಾಜ್ ಮಲಗಿದ್ದ ವೇಳೆ ಮೆಣದಬತ್ತಿಯಿಂದ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರನ್ನ ನಂಬಿಸಿ ತರಾತುರಿಯಲ್ಲಿ ಶವಸಂಸ್ಕಾರ ನಡೆಸಿದ್ದಾನೆ.

ಈ ಪ್ರಕರಣದ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪುತ್ರನೇ ತಾಯಿಯನ್ನು ಕೊಂದಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಪುತ್ರನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಹಿಂದಿನ ಲೇಖನಆಜಾದಿ ಕಿ ಅಮೃತ ಮಹೋತ್ಸವ: ಪ್ರತಿಯೊಬ್ಬರು ಮನೆ ಮುಂದೆ ಧ್ವಜಾರೋಹಣ ಮಾಡುವಂತೆ ಪ್ರಧಾನಿ ಕರೆ
ಮುಂದಿನ ಲೇಖನಗೂಗಲ್‌ನಲ್ಲಿ ನಿಮ್ಮ ಪೋಟೋ ಸುರಕ್ಷಿತವಾಗಿರಬೇಕೆಂದರೆ ಈ ಟ್ರಿಕ್ ಉಪಯೋಗಿಸಿ