ಮನೆ ರಾಷ್ಟ್ರೀಯ ಬಡ್ಗಾಮ್‌ ನಲ್ಲಿ ಮೇಘಸ್ಫೋಟ: ಮೂವರು ಕಾರ್ಮಿಕರು ಮೃತ

ಬಡ್ಗಾಮ್‌ ನಲ್ಲಿ ಮೇಘಸ್ಫೋಟ: ಮೂವರು ಕಾರ್ಮಿಕರು ಮೃತ

0

ಶ್ರೀನಗರ (Srinagar)- ಮೇಘಸ್ಫೋಟದಿಂದ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ಸಲೀಂ ಮನ್ಸೂರಿ (45), ಕೈಸರ್ ಮನ್ಸೂರಿ (20), ಮತ್ತು ಮೊಹಮ್ಮದ್ ರಯೀಸ್ (20) ಮೃತಪಟ್ಟವರು.

ಬಡ್ಗಾಮ್‌ನ ಚಂದಪೋರಾ ಗ್ರಾಮದ ಕಾರ್ಮಿಕರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮೇಲೆ ಮೇಘಸ್ಫೋಟ ಸಂಭವಿಸಿದೆ. ಘಟನೆ ನಡೆದ ಬಳಿಕ ಕಾರ್ಮಿಕರನ್ನು ಬಡ್ಗಾಮ್ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೊದಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ಹೇಳಿದ್ದಾರೆ.

ಇನ್ನು ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಿರುಗಾಳಿಯಿಂದಾಗಿ 3 ಡಜನ್‌ಗೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ. ಆಲಿಕಲ್ಲು ಮಳೆ ಜೊತೆ ಹೆಚ್ಚಿನ ವೇಗದ ಗಾಳಿಯಿಂದಾಗಿ ಕಣಿವೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ಹಿಂದಿನ ಲೇಖನಗಡಿ ಸಮಸ್ಯೆಯನ್ನು ‘ಜೀವಂತವಾಗಿ’ಡುವುದೇ ಚೀನಾದ ಉದ್ದೇಶ: ಜನರಲ್ ಮನೋಜ್ ಪಾಂಡೆ
ಮುಂದಿನ ಲೇಖನಸಿಪಿಎಂ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌