ಮೇಷ್ಟ್ರು : ನಿನ್ನೆ ಕ್ಲಾಸ್ ಮೇಟ್ ಗಳೆಲ್ಲ ಸರಿಯಾದ ಟೈಮ್ ಗೆ ಕ್ಲಾಸಿಗೆ ಬಂದಿದ್ದಾರೆ. ನೀನೊಬ್ಬ ಯಾಕೋ ಲೇಟು?
ಬಾಲು : ಗುಂಪಾಗಿ ಬರೋದು ಕುರಿಗಳು, ಸಿಂಹ ಯಾವಾಗಲೂ ಸಿಂಗಲ್ಲಾಗೆ ಬರೋದು ಸರ್.
***
ಅಜ್ಜಿ : ಯಾಕೆ ರಾಜಿ ನಿನ್ನ ಒಪ್ಪಿದ್ನಲ್ಲ ಹುಡುಗ ಅವನನ್ನ ಬೇಡ ಎಂದು ಬಿಟ್ಟೆಯಂತೆ?
ರಾಜಿ : ನಾಲ್ಕು ದಿನ ಅವನು ಓಡಾಡಿದ ಮೇಲೆ ತಿಳಿಯಿತು ಅವನು ಶತಮೂರ್ಖ ಅಂತ ಅದಕ್ಕೆ ಬೇಡ ಅಂದೆ.
ಅಜ್ಜಿ : ಈ ಕಾಲದವರೆ ಅದೃಷ್ಟವಂತರು ನಮ್ಮ ಕಾಲದಲ್ಲಿ ಮದುವೆಗೆ ಮುಂಚೆ ಗಂಡ ಆಗುವವನು ಪೆದ್ದನೋ, ಬುದ್ಧಿವಂತನೋ ಒಂದು ಗೊತ್ತಾಗುತ್ತಿರಲಿಲ್ಲ.
ರಾಜಿ : ಬರೀ ಸುಳ್ಳು ನಿನಗೆ ಗೊತ್ತಾಗಿರಬೇಕು.
ಅಜ್ಜಿ : ನಿಜವಾಗಿಯೂ ಇಲ್ಲ ರಾಜಿ.
ರಾಜಿ : ಏನಜ್ಜಿ ನೀನು ಹೇಳೋದು. ನಿನ್ನಂತಹವಳನ್ನು ಮದುವೆಯಾಗಲು ಒಪ್ಪಿದ ಅಂದಮೇಲೂ ತಾತನ್ನ ಬುದ್ದಿವಂತ ಅಂತ ಕರೆಯಕ್ಕಾಗುತ್ತಾ?
***
ಸುಮ : ನಾನೇನೇ ಆದರೂ ಗೊರಕೆ ಹೊಡೆಯುವವರನ್ನು ಮದುವೆ ಮಾಡಿಕೊಳ್ಳಲ್ಲ.
ಗೆಳತಿ : ಅದೇನು ಒಳ್ಳೆಯದೇ, ಆದರೆ…. (ರಾಗ ಎಳೆದಳು)
ಸುಮಾ : ಆದರೆ ಏನೇ ?
ಗೆಳತಿ : ಅದಕ್ಕೆ ಮದುವೆ ಮುಂಚೆ ಎಷ್ಟು ಜನರ ಜೊತೆ ಮಲಗಬೇಕಾಗುತ್ತದೆ ಏನೋ.
***
ಇಬ್ಬರು ಹುಡುಗರು ಕ್ಲಿನಿಕ್ ನಲ್ಲಿ ಕುಳಿತು ವೈದ್ಯರು ಮಾಡುವ ಕೆಲಸ ಗಮನಿಸುತ್ತಿದ್ದರು.
“ಅವರು ಸ್ಪೆಥಾಸ್ಕೋಪ್ ಮೈಮೇಲೆ ಇಟ್ಟಾಗ ಏನು ತಿಳಿಯುತ್ತೆ?” ಒಬ್ಬ ಕೇಳಿದ.
“ಮೈಯೊಳಗೆ ಇರೋ ಬ್ಯಾಕ್ಟೀರಿಯಾ ಗಳು ಪರಸ್ಪರ ಮಾತನಾಡುವುದು ಕೇಳಿಸುತ್ತೆ ಕಣೋ.”
***
ರಾಮು : ನಮ್ಮ ಗೋಪಿ ಹೆಂಡ್ತಿ ಸಕ್ಕತ್ ಕಿರಿಕ್ಕಂತೆ. ಅಡಿಗೆ, ತಿಂಡಿ, ಕಾಫಿ ಒಂದು ಸರಿಯಾಗಿ ಮಾಡಲ್ವಂತೆ.
ಶಿವ : ಹೌದಾ… ನಿನ್ ಹೆಂಡ್ತಿ ಹೇಗೆ ?
ರಾಮು : ನನ್ ಹೆಂಡ್ತಿದು ಆ ವಿಚಾರದಲ್ಲಿ ಕಿರಿಕ್ಕೇ ಇಲ್ಲಯ್ಯ. ಯಾಕಂದ್ರೆ ನಮ್ಮಲ್ಲಿ ತಿಂಡಿ, ಕಾಫಿ, ಮಾಡೋದು ನಾನೇ.
ಕಾಂಗ್ರೆಸ್ ಯುವ ಮುಖಂಡರಾದ ರಮೇಶ್ ಗೌಡರವರ ಹುಟ್ಟುಹಬ್ಬವನ್ನು ಶಾಸಕರ ಕಚೇರಿಯಲ್ಲಿ, ಆಚರಿಸಿದರು….
ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ವಾರ್ತಾ ಇಲಾಖೆಯ ಆಯುಕ್ತರಾಗಿ ಹೇಮಂತ್ ನಿಂಬಾಳ್ಳರ್ ವರ್ಗಾವಣೆ
ನಯನ ಕುಮಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಉಚಿತ ತಪಾಸಣಾ…..
ITBT ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆರ್ಜಿ ಸ್ವೀಕಾರ..!
'ಓಲ್ಡ್ ಈಸ್ ಗೋಲ್ಡ್' ಕರೋಕೆ ಗಾಯನ ಕಾರ್ಯಕ್ರಮ
ಅಪ್ಪ ಅಮ್ಮ ಅಪ್ಪು, ಎಂಬ ಚಿತ್ರದ ಧ್ವನಿಸುರುಳಿ ಬಿಡುಗಡೆ
ಭಾರತೀಯ ನ್ಯಾಯ ಸಮಿತಿ 2023 ಜುಲೈ 1, 2024 ರಿಂದ ಜಾರಿ!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.