ಮನೆ ರಾಜಕೀಯ ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ: ಸಚಿವ ಆರ್ ಅಶೋಕ್

ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ: ಸಚಿವ ಆರ್ ಅಶೋಕ್

0

ಬೆಂಗಳೂರು(Bengaluru): 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟಬೇಕು, ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಮಾಧ್ಯಮಗಳ‌ ಜೊತೆ ಮಾತನಾಡಿದ ಅವರು, ನಮ್ಮ ಸಂಪರ್ಕದಲ್ಲಿರುವ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅಂದು ಕಾಂಗ್ರೆಸ್​ ಚಿನ್ಹೆಯಿಂದ ಗೆದ್ದ 15 ಜನ ಪಕ್ಷಾಂತರ ಮಾಡುವಾಗಲೇ ತಡೆಯಲಾಗಲಿಲ್ಲ. ಇನ್ನು ಈಗ ತೆಡೆಯಲು ಹೇಗೆ ಸಾಧ್ಯ ಎಂದರು.

ಈಗಾಗಲೇ ಕಾಂಗ್ರೆಸ್ ಪಕ್ಷದವರಿಗೆ ಭಯ ಶುರುವಾಗಿದೆ. ಎಲ್ಲ ಕಡೆ ಎಎಪಿ ಕಾಂಗ್ರೆಸ್​ ಪಕ್ಷವನ್ನು ಗುಡಿಸಿ ಹಾಕುತ್ತಿದೆ. ಆಮ್ ಆದ್ಮಿ ಕಾಂಗ್ರೆಸ್ ಮತವನ್ನು ಕಬಳಿಸುತ್ತಿದೆ. ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಎಂದರೆ ಕಾಂಗ್ರೆಸ್​’ನವರಿಗೆ ಭಯ ಶುರುವಾಗುತ್ತೆ ಎಂದರು.

ಕಾಂಗ್ರೆಸ್​ ಮತ್ತು ಜೆಡಿಎಸ್​ ಅಧಿಕಾರಕ್ಕೆ ಬಂದಾಗ ಕೆಂಪೇಗೌಡ ಪ್ರತಿಮೆ ಏಕೆ ಸ್ಥಾಪನೆ ಮಾಡಲಿಲ್ಲ. ಬಾಯಲ್ಲಿ ಮಾತ್ರ ಒಕ್ಕಲಿಗರ ಮೇಲೆ ಪ್ರೀತಿ ತೋರಿಸುತ್ತಾರೆ. ನಾವು ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಮಾಡಿ ಬಡವರಿಗೆ ಸಹಕಾರ ಮಾಡಿದ್ದೇವೆ. ಅಧಿಕಾರದಲ್ಲಿದ್ದಾಗ ಎರಡು ಪಕ್ಷಗಳು ಆ ಸಮುದಾಯಕ್ಕೆ ಏನು ಕೊಡುಗೆ ನೀಡಿವೆ  ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಶಿವಮೊಗ್ಗ: ಆಸ್ತಿ ಕೊಡದ ಅಪ್ಪನನ್ನು ಸುಪಾರಿ ಕೊಟ್ಟು ಕೊಲ್ಲಿಸಿದ ಮಕ್ಕಳು
ಮುಂದಿನ ಲೇಖನರಾಜ್ಯದಲ್ಲಿ ಮಳೆ, ಶೀತಗಾಳಿ: ಮಕ್ಕಳು, ವೃದ್ಧರು ಎಚ್ಚರಿಕೆಯಿಂದಿರುವಂತೆ ಸಚಿವ ಸುಧಾಕರ್ ಸಲಹೆ