ಮನೆ ರಾಜಕೀಯ ಕ್ಷೇತ್ರದ ಅಭಿವೃದ್ಧಿಯನ್ನು ನೆನೆದು ಗೋಪಾಲಯ್ಯನವರಿಗೆ ಮತ ನೀಡಿ: ಹೇಮಲತಾ ಗೋಪಾಲಯ್ಯ

ಕ್ಷೇತ್ರದ ಅಭಿವೃದ್ಧಿಯನ್ನು ನೆನೆದು ಗೋಪಾಲಯ್ಯನವರಿಗೆ ಮತ ನೀಡಿ: ಹೇಮಲತಾ ಗೋಪಾಲಯ್ಯ

0

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ 68ನೇ ಮಹಾಲಕ್ಷ್ಮಿಪುರ ವಾರ್ಡಿನ ಬಿಬಿಎಂಪಿ 1ನೇ ಮುಖ್ಯ ರಸ್ತೆಗಳ ಬಳಿ ಇರುವ ಮನೆ ಮನೆಗೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಯನ್ನು ನೆನೆದು ಗೋಪಾಲಯ್ಯನವರಿಗೆ ಮತ ನೀಡಿ ಎಂದು ಹೇಮಲತಾ ಗೋಪಾಲಯ್ಯ ಅವರು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರ ಪರವಾಗಿ ಮತಯಾಚನೆ ನಡೆಸಿದರು.

Join Our Whatsapp Group

ಸಚಿವರು ಕ್ಷೇತ್ರದಲ್ಲಿ ಮಾಡಿದಂತಹ ಉತ್ತಮ ಕೆಲಸಗಳಾದ ಕುಡಿಯುವ ನೀರಿನ ಘಟಕ, ನವ ನಂದಿನಿ ಪಾರ್ಕ್, ಸರ್ಕಾರಿ ಶಾಲೆಗಳ ನಿರ್ಮಾಣ, ನಮ್ಮ ಕ್ಲಿನಿಕ್,  ಮಹಾನಗರ ಪಾಲಿಕೆಗಳ ಶಾಲೆಗಳು, ವಿವಿಧ ಕ್ರೀಡಾ ಮೈದಾನಗಳು ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಮತಯಾಚನೆ ಮಾಡಿದರು.

ಕ್ಷೇತ್ರದ ಜನರಿಂದ ಸಚಿವರಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ದೊರೆಯಿತು. ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಬಾರಿ ಮತ್ತೊಮ್ಮೆ ಗೋಪಾಲಣ್ಣ ಅವರನ್ನು ಗೆಲ್ಲಿಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಮಾಜಿ ಉಪಮೇಯರ್ ಎಸ್.ಹರೀಶ್,   ಡಾ.ಮಂಜುನಾಥ್ ಗೌಡ, ರೈಲು ನಾರಾಯಣ್, ಶಿವಾನಂದಮೂರ್ತಿ, ವಾರ್ಡ್ ಅಧ್ಯಕ್ಷ ಆರ್.ನಾರಾಯಣ್, ವೆಂಕಟೇಶ್ ಮೂರ್ತಿ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಹಿಂದಿನ ಲೇಖನಬೆಂಗಳೂರಿನಲ್ಲಿ ದಾಖಲೆ ಇಲ್ಲದ 7 ಕೆಜಿಗೂ ಅಧಿಕ ಚಿನ್ನ ಜಪ್ತಿ
ಮುಂದಿನ ಲೇಖನಚೌಕಾಕಾರದ ಚಕ್ರ ಇರುವ ಸೈಕಲ್ ಬಂದಿದೆ ನೋಡಿ!