ಮನೆ ಆರೋಗ್ಯ ಈ ಡ್ರೈಪ್ರೂಟ್ ಸೇವಿಸುವುದರಿಂದ ಹೃದಯದ ಖಾಯಿಲೆ ದೂರ

ಈ ಡ್ರೈಪ್ರೂಟ್ ಸೇವಿಸುವುದರಿಂದ ಹೃದಯದ ಖಾಯಿಲೆ ದೂರ

0

ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಯಾವುದು ಬೆಲೆಯಲ್ಲಿ ಸ್ವಲ್ಪ ದುಬಾರಿ ಎನಿಸುತ್ತದೆಯೋ, ಅಂತಹ ಹಾರ ಪದಾರ್ಥದಿಂದ ಆರೋಗ್ಯಕ್ಕೆ ಸಿಗುವ ಲಾಭಗಳು ಸ್ವಲ್ಪ ಹೆಚ್ಚು ಎಂದು ಹೇಳಬಹುದು! ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಒಣಬೀಜಗಳು ಅಥವಾ ಡ್ರೈ ಫ್ರೂಟ್ಸ್ ಎಂದು ಹೇಳಬಹುದು.

Join Our Whatsapp Group

ಯಾಕೆಂದ್ರೆ ಬೆಲೆಯಲ್ಲಿ ದುಬಾರಿ ಅನಿಸಿದರೂ ಕೂಡ, ಇವುಗಳಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಅಡಗಿವೆ. ಹೀಗಾಗಿ ಇಂತಹ ಒಣಫಲ ಗಳನ್ನು ನಿತ್ಯವೂ ಮಿತವಾಗಿ ಸೇವನೆ ಮಾಡುವುದರಿಂದ ಖಂಡಿತವಾಗಿಯೂ ಹಲವಾರು ರೀತಿ ಅನಾರೋಗ್ಯಗಳಿಂದ ದೂರವಿರಬಹುದು…

ಹೃದಯಕ್ಕೆ ಸಮಸ್ಯೆ ಇರುವವರಿಗೆ

• ಒಣಬೀಜಗಳಲ್ಲಿ ಅಥವಾ ಡ್ರೈ ಫ್ರೂಟ್ಸ್ಗಳಲ್ಲಿ ಇರು ವಂತಹ ವಿಟಮಿನ್ಸ್ಗಳು, ಖನಿಜಾಂಶಗಳು ಹಾಗೂ ಪ್ರಬಲ ಆಂಟಿಆಕ್ಸಿಡೆಂಟ್ಗಳು, ಸಣ್ಣ-ಪುಟ್ಟ ಕಾಯಿಲೆ ಗಳಿಂದ ಹಿಡಿದು, ದೀರ್ಘಕಾಲದ ಕಾಯಿಲೆಗಳು ಬರ ದಂತೆ ತಡೆಯುವುದು ಮಾತ್ರವಲ್ಲದೆ, ದೇಹದ ಆರೋಗ್ಯ ವನ್ನು ರಕ್ಷಿಸುವುದು.

• ಅದರಲ್ಲೂ ಪ್ರಮುಖವಾಗಿ ಪ್ರತಿದಿನ ಮೂರು-ನಾಲ್ಕು ನೆನೆಸಿಟ್ಟ ಬಾದಾಮಿ ಬೀಜಗಳನ್ನು ಹಾಗೂ ವಾಲ್ನಟ್ ಬೀಜಗಳನ್ನು ಸೇವನೆ ಮಾಡುವುದರಿಂದ, ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ಹಿಡಿದು ದೇಹದಲ್ಲಿ ಉಂಟಾಗುವ ಇನ್ನಿತರ ಹಲವಾರು ಆರೋಗ್ಯ ಸಮಸ್ಯೆ ಗಳಿಗೆ ಇವುಗಳಿಂದಮುಕ್ಕಾಲು ಪಾಲು ಪರಿಹಾರ ಸಿಗುತ್ತದೆ ಎಂದು ಹೇಳಬಹುದು.

ಹೃದಯದ ಆರೋಗ್ಯದ ವಿಚಾರದಲ್ಲಿ ನೋಡುವುದಾದರೆ..

• ನಮ್ಮ ಪುಟ್ಟ ಹೃದಯ ಆರೋಗ್ಯವಾಗಿ ಇರಬೇಕೆಂದರೆ, ಮೊದಲಿಗೆ ನಾವು ಹೃದಯ ಸ್ನೇಹಿಯಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ಜೊತೆಗೆ ಕೆಲವೊಂದು ಅನಾರೋಗ್ಯ ಆಹಾರಪದ್ದತಿ ಹಾಗೂ ಕೆಟ್ಟ ಜೀವನಶೈಲಿಯಿಂದ ದೂರವಿರಬೇಕು.

• ಹೃದಯಕ್ಕೆ ಸಹಕಾರಿಯಾದ ಆಹಾರ ಪದಾರ್ಥಗಳು ಬೇಕಾ ದಷ್ಟಿವೆ, ಕೆಲವೊಂದು ಆಹಾರಗಳು ದುಬಾರಿ ಎನಿಸಿದರೆ ಇನ್ನೂ ಕೆಲವೊಂದು ಆಹಾರಗಳು ಕೈಗೆಟಕುವ ಬೆಲೆಯಲ್ಲಿ ಸಿಗುತ್ತವೆ.

• ಪ್ರಮುಖವಾಗಿ ಹೃದಯಕ್ಕೆ ಬೇಕಾಗಿರುವ ಅಂಶಗಳಾದ ಅಮೈನೋ ಆಮ್ಲಗಳು, ಒಮೆಗಾ ತ್ರಿ ಫ್ಯಾಟಿಆಸಿಡ್ ಅಂಶ ಗಳು ಮತ್ತು ಆಲ್ಫಾ ಲಿನೊಲಿಕ್ ಆಮ್ಲವನ್ನು ಯಥೇ ಚ್ಛವಾಗಿ ಒಳಗೊಂಡಿರುವ ಆಹಾರಗಳನ್ನು, ಆದಷ್ಟು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬೇಕು.

• ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಒಣಫಲ ಗಳಾದ ಬಾದಾಮಿ ಹಾಗೂ ವಾಲ್ನಟ್ ಬೀಜಗಳು ಎಂದು ಹೇಳಬಹುದು.

ವಾಲ್ನಟ್ ಹಾಗೂ ಬಾದಾಮಿ

ವಾಲ್ನಟ್ ಹಾಗೂ ಬಾದಾಮಿ ಬೀಜಗಳಲ್ಲಿ ಪ್ರೋಟೀನ್, ವಿಟ ಮಿನ್ಸ್ ಗಳು, ನಾರಿನಾಂಶ, ಆಂಟಿ ಆಕ್ಸಿ ಡೆಂಟ್ ಅಂಶಗಳು, ಹೇರಳವಾಗಿ ಕಂಡು ಬರುವುದರಿಂದ, ಇವು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುವುದು, ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುವುದು, ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿಡಲು ನೆರವಾಗುವುದು.

ಹೃದಯದ ಆರೋಗ್ಯಕ್ಕೆ ವಾಲ್ನಟ್

• ವಾಲ್ನಟ್ ಅಥವಾ ಅಕ್ರೋಟು ಬೀಜಗಳು, ಬಾಯಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಹೃದಯದ ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿ ಕೆಲಸ ಮಾಡುತ್ತವೆ.

• ಸಂಶೋಧನೆಗಳು ಹೇಳುವ ಹಾಗೆ ವಾಲ್ನಟ್ ಬೀಜಗಳಲ್ಲಿ ಹಲವಾರು ಬಗೆಯ ಪೋಷಕಾಂಶಗಳು, ಖನಿಜಾಂಶಗಳು, ವಿಟಮಿನ್ಸ್ಗಳು ಹಾಗೂ ಪ್ರಬಲ ಆಂಟಿಆಕ್ಸಿಡೆಂಟ್ ಗಳಿದ್ದು, ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

• ಹೀಗಾಗಿ ಪ್ರತಿದಿನ ಮಿತವಾಗಿ ವಾಲ್ನಟ್ ಬೀಜಗಳನ್ನು ಸೇವನೆ ಮಾಡುವ ಜನರಲ್ಲಿ ಮತ್ತು ಇವುಗಳನ್ನು ದಿನಾ ಅಭ್ಯಾಸ ಮಾಡಿಕೊಂಡಿರುವ ಜನರಿಗೆ ಹೃದಯದ ಕಾಯಿಲೆ ಕಂಡುಬರುವ ಆತಂಕ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

ನೆನೆಸಿಟ್ಟ ಬಾದಾಮಿ ಬೀಜಗಳು

• ಬಾದಾಮಿ ಬೀಜಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ ಎಂದು ಹೇಳಬಹುದು. ಮುಖ್ಯವಾಗಿ ಹೃದಯದ ಆರೋಗ್ಯಕ್ಕೆ ಇವು ಪೂರಕವಾಗಿವೆ.

• ಹೀಗಾಗಿ ಇಂತಹ ಬೀಜಗಳನ್ನು ಪ್ರತಿದಿನ ನೀರಿನಲ್ಲಿ ನೆನೆ ಸಿಟ್ಟು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವುದ ರಿಂದ, ಹೃದಯದ ಆರೋಗ್ಯ ವೃದ್ಧಿ ಆಗುವುದು ಮಾತ್ರ ವಲ್ಲದೆ, ಹಲವಾರು ಕಾಯಿಲೆಗಳು ಕೂಡ ದೂರವಾಗು ವುದು.

• ಪ್ರಮುಖವಾಗಿ ಬಾದಾಮಿ ಉತ್ತಮ ಪ್ರಮಾಣದ ಕರಗುವ ನಾರಿನಾಂಶ, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ, ಆಂಟಿ ಆಕ್ಸಿಡೆಂಟ್ ಹಾಗೂ ಇತರ ಪೋಷ ಕಾಂಶಗಳು ಯಥೇಚ್ಛವಾಗಿ ಕಂಡು ಬರುತ್ತವೆ.

• ಇವು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ರಕ್ಷಿಸಲು ನೆರವಾ ಗುತ್ತದೆ.

ಹಿಂದಿನ ಲೇಖನಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೈಎಸ್ ಆರ್ ತೆಲಂಗಾಣ ಪಕ್ಷದ ಮುಖ್ಯಸ್ಥೆ ವೈ.ಎಸ್.ಶರ್ಮಿಳಾ
ಮುಂದಿನ ಲೇಖನಪತ್ನಿ ಮಕ್ಕಳಿಗೆ ಜೀವನಾಂಶ: ಸಂಪಾದನೆ ಕಡಿಮೆ ಇದ್ದರೆ ಪತಿ ಬದಲಿ ಕೆಲಸ ಮಾಡಲಿ ಎಂದ ಹೈಕೋರ್ಟ್