ಮನೆ ರಾಜ್ಯ ಹೃದಯಾಘಾತದಿಂದ ಇಬ್ಬರು ಯುವ ಪತ್ರಕರ್ತರ ಸಾವು

ಹೃದಯಾಘಾತದಿಂದ ಇಬ್ಬರು ಯುವ ಪತ್ರಕರ್ತರ ಸಾವು

0

ಬೆಂಗಳೂರು (Bengaluru)- ಇಬ್ಬರು ಯುವ ಪತ್ರಕರ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ವಿಜಯ ಕರ್ನಾಟಕ ಕನ್ನಡ ದೈನಿಕದಲ್ಲಿ (29) ಡಿಸೈನರ್ ಆಗಿದ್ದ ಸೂರ್ಯ ಕುಮಾರ್ ನಿನ್ನೆ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಸೂರ್ಯಕುಮಾರ್ ಮಂಡ್ಯದ ಬಸರಾಳು ಗಿಡ್ಡಗೌಡನ ಕೊಪ್ಪಳದ ನಿವಾಸಿ. ಅವರು ತಂದೆ-ತಾಯಿ, ಪತ್ನಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಹರೀಶ್ ಹುಲಿಕಟ್ಟೆ (29) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರೂ ಸಹ ತಂದೆ-ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

ನಮ್ಮನ್ನು ಅಗಲಿದ ಇಬ್ಬರು ಯುವ ಪತ್ರಕರ್ತರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಂತಾಪ ಸೂಚಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಕೂಡ ಸಾವಿಗೆ ಸಂತಾಪ ಸೂಚಿಸಿದೆ.

ಹಿಂದಿನ ಲೇಖನಮೇ 28ರ ರಾಶಿ ಭವಿಷ್ಯ
ಮುಂದಿನ ಲೇಖನರಾಜ್ಯದಲ್ಲಿ 171 ಮಂದಿಗೆ ಕೋವಿಡ್ ಸೋಂಕು