ಬೇಕೆನಿಸಿದರು ನಿನ್ನ ಬಳಿ ಇರಲಾಗದಿರುವಾಗ
ನೆನೆದರೂ ನಿನ್ನ ಸನಿಹ ಬರಲಾಗದಿರುವಾಗ
ಬಯಸಿದರು ನಿನ್ನ ಸಂಗ ಸಿಗಲಾಗದಿರುವಾಗ
ಮುನಿದು ಮೌನದಿ ಮರೆಯಾಗದಿರು ಗೆಳತಿ
ಚಿತ್ತ ಚೈತನ್ಯ ಜಡವಾಗಿ ಏನು ತೋಚದಾದಾಗ
ಎದೆ ಭಾವ ಜಲ ಬತ್ತುತ ಬರಡಾದಂತಾದಾಗ
ಪದ ಸಾಲು ಮಿನುಗಿ ಹೊಳೆಯದಂತಾದಾಗ
ಕನಿಕರವಿಲ್ಲದೆ ಕೈತಪ್ಪಿ ಹೋಗದಿರು ಗೆಳತಿ
ಹೀಗೆ ಬರೆಯಲೂ ಆಗದಷ್ಟು ಬಸವಳಿದಾಗ
ಹಾಗೆ ಓಡುತಾ ಕಾಲದೊಂದಿಗೆ ಜಿದ್ದಿಗಿಳಿದಾಗ
ಕ್ಷಣ ಬಿಡುವಿರದೆ ಬೆಂದು ಬಳಲಿ ಹೈರಾಣಾದಾಗ
ಹೇಳದೆ ಕೇಳದೆ ಕಾಣೆಯಾಗದಿರು ಗೆಳತಿ
ಚಿಂತೆಯಲ್ಲಿರಲಿ ಸಂತೆಯಲ್ಲಿರಲಿ ಬಿಗುಮಾನಿಸದೆ
ಸಂತಸದಲ್ಲಿರಲಿ ಸಂಕಟದಲ್ಲಿರಲಿ ಅನುಮಾನಿಸದೆ
ಎಲ್ಲಿದ್ದರೂ ಹೇಗಿದ್ದರೂ ಯೋಚಿಸದೆ ಯಾಚಿಸದೆ
ಬಂದೆನ್ನ ಒಪ್ಪಿ ಬರಸೆಳೆದು ಬಿಗಿದಪ್ಪಿ ಬಿಡು ಗೆಳತಿ
ನೀನೆನ್ನ ಜೀವದಾ ಭಾವ, ಭಾವದ ಜೀವ ಗೆಳತಿ.
ನೀನೆನ್ನ ಅರಿವು, ಅಂತಃಕರಣಗಳ ದೈವ
ನಿನ್ನಿಂದಲೇ ಈ ಜಗದಿ ನನಗೊಂದು ಮಾನ್ಯತೆ,
ನಿನ್ನಿಂದಲೇ ಈ ಬದುಕಿಗೊಂದು ಅಸ್ಮಿತೆ ಧನ್ಯತೆ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.