ಮನೆ ರಾಜ್ಯ ಹಾಸನ: ಕಾಡಾನೆ ದಾಳಿಗೆ ವೃದ್ಧ ಬಲಿ

ಹಾಸನ: ಕಾಡಾನೆ ದಾಳಿಗೆ ವೃದ್ಧ ಬಲಿ

0

ಹಾಸನ(Hassan): ಕಾಡಾನೆಗಳ ದಾಳಿಗೆ ಶನಿವಾರ ಜಿಲ್ಲೆಯ ಕೆಲಗಳಲೆ ಗ್ರಾಮದಲ್ಲಿ ವೃದ್ಧ ಮೃತಪಟ್ಟಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ಕೃಷ್ಣೇಗೌಡ (67) ಮೃತ ವ್ಯಕ್ತಿ.

ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ ಮೂರು ಕಾಡಾನೆ ದಾಳಿ ಮಾಡಿವೆ.

ಕಾಡಾನೆ ಹಿಂಡು ಕಂಡ ಕೂಡಲೇ ಎಲ್ಲರೂ ಓಡಿದ್ದಾರೆ. ಈ ವೇಳೆ ಕೃಷ್ಣೇಗೌಡ ಕೆಳಗೆ ಬಿದ್ದಿದ್ದಾರೆ. ೀ ವೇಳೆ ಕಾಡಾನೆಗಳು ತುಳಿದು ಸಾಯಿಸಿದೆ. ಸುದೇಶ್ ಮತ್ತು ಪ್ರಥಮ್ ತಪ್ಪಿಸಿಕೊಂಡಿದ್ದಾರೆ.

ಸಾವಿಗೀಡಾದ ಕೃಷ್ಣೇಗೌಡ ಮನೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು‌ ಮುಟ್ಟಿದೆ. ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ‌ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಹಿಂದಿನ ಲೇಖನಶಾಲೆಗಳ ದುಸ್ಥಿತಿ ಸರಿಪಡಿಸಲು ಸರಕಾರಕ್ಕೆ ತಿಂಗಳ ಗಡುವು: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನತಂಬಾಕು ಹದಗೊಳಿಸುವ ಬ್ಯಾರನ್ ಗೆ ಬೆಂಕಿ:  6 ಲಕ್ಷ ರೂ.ನಷ್ಟ