ಮನೆ ಸುದ್ದಿ ಜಾಲ ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ: ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ: ದ್ವಿಚಕ್ರ ವಾಹನಗಳು ಬೆಂಕಿಗಾಹುತಿ

0

ಬೆಂಗಳೂರು: ಕರಗ ಮಹೋತ್ಸವದ ವೇಳೆ ದೇವಸ್ಥಾನದ ಮುಂದೆ ಹಚ್ಚಲಾಗಿದ್ದ ಕರ್ಪೂರದ ಬೆಂಕಿ ತಗುಲಿ ದ್ವಿಚಕ್ರವಾಹನಗಳು ಬೆಂಕಿಗಾಹುತಿಯಾಗಿವೆ.

Join Our Whatsapp Group

ದೇವಸ್ಥಾನದ ಮುಂದೆ ಕರ್ಪೂರ ಹಚ್ಚಲಾಗಿತ್ತು. ಈ ವೇಳೆ ಕರ್ಪೂರದ ಬೆಂಕಿ ತಗುಲಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ 10 ಬೈಕ್ ಗಳು ಹೊತ್ತಿ ಉರಿದಿವೆ. ವಾಹನಗಳನ್ನು ತೆರವುಗೊಳಿಸುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡಿದರೂ ಭಕ್ತರು ವಾಹನಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಬೆಂಕಿ ಸುತ್ತಮುತ್ತಲೂ ವ್ಯಾಪಿಸಿದೆ ಎನ್ನಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.

ಹಿಂದಿನ ಲೇಖನನೆಲ್ಲಿಕಾಯಿ ಜ್ಯೂಸ್ ಕುಡಿದ್ರೆ ಕೊಲೆಸ್ಟ್ರಾಲ್ ಕಂಟ್ರೋಲ್ ಗೆ ಬರುತ್ತಂತೆ
ಮುಂದಿನ ಲೇಖನ‘ಆದಿಪುರುಷ’ ಚಿತ್ರ ತಂಡ ‘ಹನುಮಂತನ‘ ಫಸ್ಟ್ ಲುಕ್ ಬಿಡುಗಡೆ