ಮನೆ ರಾಜ್ಯ ಹನೂರು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ ಮತ್ತು ಬಿ. ವೆಂಕಟೇಶ್ ಬೆಂಬಲಿಗರ ನಡುವೆ...

ಹನೂರು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ ಮತ್ತು ಬಿ. ವೆಂಕಟೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

0

ಹನೂರು(Hanur): ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್ ಸಿ ಮೋರ್ಚಾ ಸಭೆಯಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಬಿಜೆಪಿ ಜಿಲ್ಲಾ ಸಂಯೋಜಕ ಜನಧ್ವನಿ ಬಿ ವೆಂಕಟೇಶ್ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ ಸಿ ಮೋರ್ಚಾ ಸಭೆಯನ್ನು ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ಎಸ್ ಸಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನಧ್ವನಿ ಬಿ ವೆಂಕಟೇಶ್ ಅವರನ್ನೂ ಕರೆದಿರಲಿಲ್ಲ. ಆದರೆ ಸಭೆಗೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಪ್ರೀತಂ ನಾಗಪ್ಪ ಆಗಮಿಸಿದ ಹಿನ್ನೆಲೆ ಜನಧ್ವನಿ ಬಿ ವೆಂಕಟೇಶ್ ರವರ ಬೆಂಬಲಿಗರು ನಾಯಕರುಗಳ ಜತೆ ವಾಗ್ವಾದ ನಡೆಸಿ ಹರಿಹಾಯ್ದಿದ್ದಾರೆ.

ಕಳೆದ ತಿಂಗಳು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹನೂರು ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ ಅಲ್ಲಿಯವರೆಗೆ ಪರಿಮಳ ನಾಗಪ್ಪ,ಜನಧ್ವನಿ ಬಿ ವೆಂಕಟೇಶ್ ಡಾ. ದತ್ತೇಶ್ ಕುಮಾರ್, ಪ್ರೀತಂ ನಾಗಪ್ಪ ಎಲ್ಲಾ ನಾಯಕರುಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗುವಂತೆ ವರಿಷ್ಠರು ಆದೇಶ ನೀಡಿದ್ದರು.

 ಈ ಹಿನ್ನೆಲೆ ಹನೂರು ಪಟ್ಟಣದಲ್ಲಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಪ್ರಯುಕ್ತ ಒಬಿಸಿ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ವರಿಷ್ಠರು ಸೂಚನೆ ನೀಡಿ ಇನ್ನೂ ಸಹ ತಿಂಗಳು ಕಳೆದಿಲ್ಲ ಆಗಲೇ ಬಣ ರಾಜಕೀಯ ಭುಗಿಲೆದ್ದು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.

ಹಿಂದಿನ ಲೇಖನಕೋಲಾರ: ಒತ್ತುವರಿ ತೆರವು ವೇಳೆ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನ
ಮುಂದಿನ ಲೇಖನಅರಣ್ಯ ಇಲಾಖೆ ವಶದಲ್ಲಿದ್ದ ವ್ಯಕ್ತಿ ಸಾವು: ಕುಟುಂಬಸ್ಥರ ಪ್ರತಿಭಟನೆ