ಮನೆ ರಾಜ್ಯ ಗದಗ: ಜಾನುವಾರು ತೊಳೆಯಲು ಹೋಗಿ ನೀರುಪಾಲಾಗಿದ್ದ ಇಬ್ಬರು ಬಾಲಕರ ಶವ ಪತ್ತೆ

ಗದಗ: ಜಾನುವಾರು ತೊಳೆಯಲು ಹೋಗಿ ನೀರುಪಾಲಾಗಿದ್ದ ಇಬ್ಬರು ಬಾಲಕರ ಶವ ಪತ್ತೆ

0

ಗದಗ: ಜಾನುವಾರು ತೊಳೆಯಲು ಹೋಗಿ ಹೊಂಡದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಶವ ಪತ್ತೆಯಾಗಿದೆ.

ಗದಗ ನಗರದ ರೆಹಮತ್ ಬಡಾವಣೆ ಬಳಿಯ ಹೊಂಡದಲ್ಲಿ ನಾಪತ್ತೆಯಾಗಿದ್ದ ಬಾಲಕರಲ್ಲಿ ನಿನ್ನೆ ರಾತ್ರಿ ಒಬ್ಬ ಬಾಲಕ,ಇಂದು ಬೆಳಗ್ಗೆ ಮತ್ತೊಬ್ಬ ಬಾಲಕನ ಶವ ಪತ್ತೆಯಾಗಿದೆ.

ರಾತ್ರಿ ಸಂತೋಷ್ ಕುಂಬಾರ್ (14) ಮೃತದೇಹ ಪತ್ತೆಯಾಗಿತ್ತು. ಬೆಳಗ್ಗೆ ಮೊಹಮ್ಮದ್ ಅಮನ್ (12) ಎಂಬುವವನ ಶವ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನ ಜಾನುವಾರು ತೊಳೆಯಲು ಹೊಗಿದ್ದ ಮಹಿಳೆ ಸೇರಿ ನಾಲ್ವರು ನೀರುಪಾಲಾಗಿದ್ದು,ಮಹಿಳೆ ಶಾಹೀನ್ ಹುಬ್ಬಳ್ಳಿ, ಆಕೆಯ ಮಗ ಮೊಹಮ್ಮದ್ ಆದಿಲ್ ನನ್ನ ಸ್ಥಳೀಯರು ಬಚಾವ್ ಮಾಡಿದ್ದರು.

ನಾಪತ್ತೆಯಾಗಿದ್ದ ಇಬ್ಬರು ಬಾಲಕರಿಗಾಗಿ ನಿನ್ನೆಯಿಂದ ಶೋಧ ಕಾರ್ಯ ನಡೆದಿತ್ತು.

ಹಿಂದಿನ ಲೇಖನರಾಯಚೂರು: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದಲೇ ಯುವಕನ ಕೊಲೆ
ಮುಂದಿನ ಲೇಖನಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವ ಆರ್ ಬಿ ತಿಮ್ಮಾಪೂರ: ಸಿಬ್ಬಂದಿ‌ಗೆ ತರಾಟೆ