ಮನೆ ರಾಜ್ಯ ಪರಮಾತ್ಮನ ಅವತಾರದ ರೂಪ ಗುರು: ಆರ್‍ ಎಸ್‍ಎಸ್‍ ವಿಭಾಗದ ಪ್ರಚಾರಕ ಅಕ್ಷಯ್

ಪರಮಾತ್ಮನ ಅವತಾರದ ರೂಪ ಗುರು: ಆರ್‍ ಎಸ್‍ಎಸ್‍ ವಿಭಾಗದ ಪ್ರಚಾರಕ ಅಕ್ಷಯ್

0

ಮೈಸೂರು(Mysuru):ಪರಮಾತ್ಮನ ಅವತಾರದ ರೂಪ ಗುರು. ಆ ಸ್ಥಾನದಲ್ಲಿರುವ ಯಾವ ವ್ಯಕ್ತಿಯನ್ನಾದರೂ ಗೌರವದಿಂದ ಕಾಣಬೇಕು ಎಂದು ಆರ್‍ ಎಸ್‍ಎಸ್‍ ವಿಭಾಗದ ಪ್ರಚಾರಕ ಅಕ್ಷಯ್ ಅಭಿಪ್ರಾಯಪಟ್ಟರು

ಇಂದು ಜೆಎಲ್ ಬಿ ರಸ್ತೆಯಲ್ಲಿರುವ ಮಾಧವಕೃಪದಲ್ಲಿ ಶ್ರೀ ಜನಜಾಗರಣ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಗುರುಪೂರ್ಣಿಮ ಪ್ರಯುಕ್ತ ಏರ್ಪಡಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದು ಬದುಕಿನ ಕೊನೆಯವರೆಗೆ ಉಳಿಯುವುದಿಲ್ಲ. ಆದರೆ ಗುರುವಿನಿಂದ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಸ್ಥಳ, ಸಮಯ ಹಾಗೂ ವ್ಯಕ್ತಿ ಬದಲಾದರೂ ಗುರುವಿನ ಸ್ಥಾನ ಬದಲಾಗದು. ಅಜ್ಞಾನದ ಕತ್ತಲನ್ನು ದೂರ ಮಾಡಿ, ವಿವೇಕದ ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡೊಯ್ಯುವ ಮಹಾನ್ ವ್ಯಕ್ತಿ ದೈವಿ ಗುರು. ಗುರು ನೀಡಿದ ಸಂದೇಶಗಳನ್ನು ಅರಿತು ಸತ್ಕಾರ್ಯಗಳನ್ನು ಮಾಡುತ್ತಾ ಮನಃಶಾಂತಿಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ 50 ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಮಾಜಿ ಕಮಾಂಡೊ ಸಿ.ಎಂ.ಶ್ರೀಧರ್, ಜೀವನಿಧಿ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಟ್ರಸ್ಟ್ ನ ಕಾರ್ಯದರ್ಶಿ ಶ್ರೀನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ
ಮುಂದಿನ ಲೇಖನಉರಗ ಸಂತತಿಯ ಉಳಿವು ಮುಖ್ಯ: ಉರಗ ತಜ್ಞ ಸ್ನೇಕ್ ಶಾಮ್