ಮನೆ ಸುದ್ದಿ ಜಾಲ ಜನವರಿಯಲ್ಲಿ ಹಂಪಿ, ಆನೆಗೊಂದಿ ಉತ್ಸವ: ಸಚಿವ ಆನಂದ ಸಿಂಗ್

ಜನವರಿಯಲ್ಲಿ ಹಂಪಿ, ಆನೆಗೊಂದಿ ಉತ್ಸವ: ಸಚಿವ ಆನಂದ ಸಿಂಗ್

0

ಕೊಪ್ಪಳ: ಜನವರಿಯಲ್ಲಿ ಹಂಪಿ, ಆನೆಗೊಂದಿ ಉತ್ಸವ ಎರಡನ್ನೂ ಮಾಡಲಿದ್ದೇವೆ ಎಂದು ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ-ಆನೆಗೊಂದಿ ಒಂದಕ್ಕೊಂದು ಸಂಬಂಧವಿದೆ. ಎರಡೂ ಕಡೆ ಉತ್ಸವ ಮಾಡುವ ಚಿಂತನೆಯಲ್ಲಿದ್ದೇವೆ. ಈ ಹಿಂದೆ ಹಂಪಿ ಉತ್ಸವ ಸಂಭ್ರಮದಿಂದ ಮಾಡಿದ್ದೇವೆ ಎಂದರು.

ಕೋವಿಡ್‌ ಹಿನ್ನೆಲೆಯಲ್ಲಿ ಉತ್ಸವ ಆಚರಿಸಲು ಸಾಧ್ಯವಾಗಲಿಲ್ಲ. ನವೆಂಬರ್‌ನಲ್ಲಿ ಉತ್ಸವ ಆಚರಣೆ ಮಾಡಬೇಕಿತ್ತು. ಆದರೆ ಸಾಧ್ಯವಾಗಿಲ್ಲ. ಜನವರಿಯಲ್ಲಿ ಎರಡೂ ಉತ್ಸವಗಳನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದರು.

ಹಿಂದಿನ ಲೇಖನಪತ್ನಿ ಸಾವು: ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ
ಮುಂದಿನ ಲೇಖನಡಿಸೆಂಬರ್ 18ರಂದು ಸಿಎಲ್ಎಟಿ- 2023 ಪರೀಕ್ಷೆ