ಮನೆ ರಾಷ್ಟ್ರೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂರ ಮೀಸಲಾತಿ ಗೆ ಕತ್ತರಿ: ಅಮಿತ್ ಶಾ

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂರ ಮೀಸಲಾತಿ ಗೆ ಕತ್ತರಿ: ಅಮಿತ್ ಶಾ

0

ತೆಲಂಗಾಣ : ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ ಮೀಸಲಾತಿ ಕಿತ್ತು ಹಾಕಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಷಾ ಹೇಳಿದರು.

Join Our Whatsapp Group

ಸಮಾವೇಶದಲ್ಲಿ ಮಾತನಾಡಿ, ಕೆಸಿಆರ್ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ, ಕೆಸಿಆರ್ ಅವರೇ ಪ್ರಧಾನಿ ಸ್ಥಾನ ಖಾಲಿ ಇಲ್ಲ, ಮೊದಲು ಸಿಎಂ ಸ್ಥಾನ ಭದ್ರ ಮಾಡಿಕೊಳ್ಳಿ, ಮುಂದಿನ ಬಾರಿ ಸಹ ಮೋದಿಯವರೇ ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು.

ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಹೋರಾಡುವುದನ್ನು ನಿಲ್ಲಿಸಲ್ಲ. ತೆಲಂಗಾಣದಲ್ಲಿ ಹೆದ್ದಾರಿಗಳಿಗೆ ಕೋಟಿ ಹಣ ಖರ್ಚು ಮಾಡಲಾಗಿದೆ, ಆದ್ರೆ ಜನರಿಗೆ ಸಿಗುತ್ತಿದ್ಯಾ ಎಂದು ಪ್ರಶ್ನಿಸಿದರು.

ತೆಲಂಗಾಣದ ಬಡವರನ್ನು ಮೋದಿಯಿಂದ ದೂರ ಮಾಡಲು ಕೆಸಿಆರ್ ಗೆ ಸಾಧ್ಯವಿಲ್ಲ, ಕೆಸಿಆರ್ ಯುವಕರ ಬಾಳಲ್ಲಿ ಆಟವಾಡುತ್ತಿದ್ದಾರೆ, ಪೇಪರ್‌ ಲಿಕೇಜ್ ನಿಂದ ನಿರುದ್ಯೋಗಿಗಳ ಬದುಕು ಕತ್ತಲಾಗಿದೆ, ಯಾರೂ ಏನೇ ಹೇಳಿದ್ರೂ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಮುಂದಿನ ಬಾರಿ ಹೆಚ್ಚಿನ ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲು ನಮಗೆ ಸಹಕರಿಸಿ ಎಂದು ಜನತೆಗೆ ಮನವಿ ಮಾಡಿದರು.

ಇನ್ನೂ ರಾಜ್ಯದಲ್ಲಿ ಮೀಸಲು ಹೆಚ್ಚಳ, ಮೀಸಲು ವರ್ಗೀಕರಣ, ಸಾಮಾಜಿಕ ನ್ಯಾಯದ ಬಗ್ಗೆ ತಿಳಿಸಿ ಎಲ್ಲಸಮುದಾಯಗಳ ವಿಶ್ವಾಸ ಗಳಿಸಿ ಎಂದು ಅಮಿತ್ ಷಾ ಸೂಚಿಸಿದ್ದಾರೆ.

ಹಿಂದಿನ ಲೇಖನಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ದೂರು ದಾಖಲು
ಮುಂದಿನ ಲೇಖನಬೀದರ್ ನ 6 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ