ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗೀತಾ : (ಹಾಲು ಕೊಡುವವನಿಗೆ)ನೀನೇ ಏಕಯ್ಯಾ ಹಾಲು ತರಲಿಲ್ಲಾ ?
ಹಾಲಿನವ : ಏನು ಮಾಡಲಿ ತಾಯಿ ನೆನ್ನೆ ನಮ್ಮನೆ ನಲ್ಲೀಲಿ ನೀರೇ ಬರಲಿಲ್ಲ.
**

Join Our Whatsapp Group

ಗೀತಾ : ಪ್ರತಿದಿನ ಸಕ್ಕರೆ ಡಬ್ಬ ತೆಗೆದು ನೋಡ್ತಿರಲ್ಲ ಏಕೆ ?
ರಾಜು : ಪ್ರತಿದಿನ ಶುಗರ್ ಚೆಕ್ ಮಾಡಿಕೊಳ್ಳುತ್ತಾ ಇರಿ ಅಂತ ಡಾಕ್ಟರ್ ಹೇಳಿದ್ದಾರೆ.
*
ಪೋಲಿಸ್ : ಈ ನಟ್ಟ ನಡುರಾತ್ರಿಯಲ್ಲಿ ಎಲ್ಲಿಗೆ ಹೋಗ್ತಾ ಇದ್ದೀಯ ?
ಕುಡುಕ : ಕುಡಿತದ ಬಗ್ಗೆ ಭಾಷಣ ಕೇಳಕ್ಕೆ
ಪೊಲೀಸ್ : ಇಷ್ಟು ಹೊತ್ತಿನಲ್ಲಿ ಯಾರು ಭಾಷಣ ಮಾಡ್ತಾರೆ ?
ಕುಡುಕ : ನನ್ನ ಹೆಂಡ್ತಿ.


  • ಶಿಕ್ಷಕ : ರಾಜು ಇಷ್ಟು ದಿನ ನಿಂಗೆ ಪಾಠ ಹೇಳಿದೆ. ಈ ಬಾರಿ ಪರೀಕ್ಷೆಯಲ್ಲಿ ತೇರ್ಗಡೆಯೂ ಆದೆ. ನಂಗೇನು ಕೊಡ್ತೀಯಾ ?
    ರಾಜು : ಗುರುಗಳೇ ನಿಮ್ಮಗಳಿಗೆ ಲೈಫ್ ಕೊಡ್ತೀನಿ ಆಯ್ತಾ.
    **
    ಹಿಟ್ಟು : ರಾಜು ನಿಂಗೆ ಎಷ್ಟು ಮಕ್ಕಳು ?
    ರಾಜು : ನೀನೆ ಲೆಕ್ಕ ಹಾಕು, ಎರಡು ಕೆಲಸಕ್ಕೆ ಹೋಗಿವೆ. ಮೂರು ಸಿನಿಮಾಕ್ಕೆ ಹೋಗಿವೆ. ಮೂರು ಶಾಲೆಗೆ ಹೋಗಿವೆ. ಈಗ ಕೈಲೊಂದಿದೆ, ಹೊಟ್ಟೆಯಲ್ಲಿ ಒಂದಿದೆ.
    ಕಿಟ್ಟು : ಅಯ್ಯೋ ! ಅಯ್ಯೋ ! ಅಷ್ಟೊಂದು ಮಕ್ಕಳು ಯಾಕೋ ಬೇಕಿತ್ತೋ ?
    ರಾಜು : ನಮ್ಮ ಮಾವನಿಗೆ ಕೊಟ್ಟ ಮಾತಿನಂತೆ ನಡ್ಕೊಂಡೆ. ಅದು ಹೀಗಾಯ್ತು.
    ಕಿಟ್ಟು : ಅವರಿಗೇನು ಮಾತು ಕೊಟ್ಟಿದ್ದೆ ?
    ರಾಜು : ನಿಮ್ಮಗಳ್ನ ಎಂದು ಖಾಲಿ ಹೊಟ್ಟೆಯಲ್ಲಿ ಇರೋಕೆ ಬಿಡಲ್ಲ ಅಂತ.
ಹಿಂದಿನ ಲೇಖನಪರಿವೃತ ತ್ರಿಕೋನಾಸನ
ಮುಂದಿನ ಲೇಖನMGNREGA: 12 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ