ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪೋಲಿಸ್ : ನಿನ್ನ ಮಿತ್ರ ಬಷೀರ್ ಹೇಗೆ ಸತ್ತಾ?

ರಾಜು : ನನ್ನ ಹೊಟ್ಟೆಲಿ ಇಲಿ ಓಡಾಡ್ತಾ ಇದೆ ಅಂತ ಹೇಳಿದ.

ಪೊಲೀಸ್ : ಅದಕ್ಕೆ ನೀನೇನು ಮಾಡಿದೆ ?

ರಾಜು : ಇಲಿ ಸಾಯ್ಲೀ ಅಂತ ಇಲಿ ಪಾಷಾಣ ಕೊಟ್ಟೆ. ಇಲಿ ಸಾಯ್ಲಿಲ್ಲ. ಇವನೇ ಸತ್ಯ ಅಷ್ಟೇ.

****

ತಂದೆ : ಏನು ಮಗನೇ ನಿನಗೆ ಸ್ವಲ್ಪನೂ ಬುದ್ಧಿ ಇಲ್ವಲ್ಲೋ

ಮಗ : ಏನೇ ಆಗಲಿ ನಾನು ನಿನ್ನ ಮಗನೇ ಅಲ್ವೇನಪ್ಪಾ.

****

ಮ್ಯಾನೇಜರ್ : ನಿನಗೊಂದು ಪ್ರಶ್ನೆ ಕೇಳಲಾ ?

ರಾಜು : ಕೇಳಿ ಬಾಸ್

ಮ್ಯಾನೇಜರ್ : ಈಗ ನೀನು ನಿಮ್ಮ ಕಚೇರಿ ಜವಾನನಾಗಿ ಕೆಲಸ ಮಾಡ್ತಾ ಇದ್ದೀಯ. ನಾನು ನಿನಗೆ ಮ್ಯಾನೇಜರ್ ಆಗಿದ್ದೀನಿ. ಒಂದು ವೇಳೆ ನೀನು ಮ್ಯಾನೇಜರ್ ಆಗಿ ನಾನು ಜವಾನನಾದರೆ ಏನು ಮಾಡುತ್ತೀಯಾ ?

ರಾಜು : ಮೊದ್ಲು ಜವಾನನ್ನ ಬದಲಿಸುತ್ತೇನೆ ಅಷ್ಟೇ.