ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿಕ್ಷಕ : ಮಾತೃದೇವೋಭವ, ಆಚಾರ್ಯ ದೇವೋಭವ ಅಂತ ಹೇಳ್ತಾರೆ. ಈ ಇಬ್ಬರಲ್ಲಿ ಯಾರು ಉತ್ತಮವೋ?

 ರಾಜು :‘ ಆಚಾರ್ಯ ದೇವೋಭವ’ ಅಂದರೆ ಶಿಕ್ಷಕರಾದ ನೀವೇ ಉತ್ತಮ.

 ಶಿಕ್ಷಕ : ಅದು ಹೇಗೆ ಹೇಳ್ತೀಯ?

 ರಾಜು : ನಮ್ಮ ತಾಯಿ, ನನ್ನ ತಮ್ಮನ ಮಲಗಿಸೋಕೆ ಒಂದು ಘಂಟೆ ತಗೋಳ್ತೆಳೆ, ನೀವು ಕೇವಲ 15 ನಿಮಿಷದಲ್ಲಿ ತರಗತಿ ಹುಡುಗರನ್ನೆಲ್ಲಾ ಮಲಗಿಸ್ತೀರಿ ಆದ್ದರಿಂದ ನೀವೇ ಉತ್ತಮ ಗುರುಗಳೆ. 

Join Our Whatsapp Group

***

 ಟೀಚರ್ : ಹೋಂ ವರ್ಕ್ ಯಾರು ಮಾಡ್ಕೊಂಡು ಬಂದಿಲ್ಲ ಹೇಳಿ?

 ರಾಜು : ನಾನು ಮಾಡ್ಕೊಂಡು ಬಂದಿಲ್ಲ ಟೀಚರ್

 ಟೀಚರ್ : ಯಾಕೋ ನಿನಗೇನಾಯ್ತು?

 ರಾಜು : ನಾನಿರೋದೇ ಹಾಸ್ಟೆಲ್ ನಲ್ಲಿ ಹೋಂ ವರ್ಕ್ ಹೇಗೆ ಮಾಡೋಕೆ ಸಾಧ್ಯ ಟೀಚರ್?

***

 ಕಿಟ್ಟು : ಲೋ ರಾಜು ಆ ಸ್ವಾಮಿಗಳ ಹತ್ರ ಮಂತ್ರ ಕಲಿಯೋಕೆ ಹೋಗಿದ್ಯಲ್ಲಾ ಕಲ್ತು ಬಂದ್ಯಾ?

ರಾಜು : ಕಲ್ತು ಬಂದೆ  ನಿನ್ಮೇಲೆ ಪ್ರಯೋಗಿಸಲೇ?

 ಕಿಟ್ಟು : ಆಯ್ತು ಪ್ರಯೋಗಿಸು

 ರಾಜು : ಛೂ ಮಂತರ್ ಓಂ, ರೀಂ, ಝೀಂ, ನೀಂ,ಏನಾದ್ರೂ ಆಯ್ತಾ?

 ಕಿಟ್ಟು : ಏನು ಆಗ್ಲಿಲ್ಲ.

 ರಾಜು : ಸ್ವಾಮಿಗಳು ಹೇಳಿದ್ದು ನಿಜವಾಯ್ತು

 ಕಿಟ್ಟು : ಸ್ವಾಮಿಗಳು ಏನು ಹೇಳಿದ್ರು?

 ರಾಜು : ಕೋತಿಗಳ ಮೇಲೆ ಈ ಮಂತ್ರ ಪ್ರಭಾವ ಬೀರೋದಿಲ್ವಂತೆ..

ಹಿಂದಿನ ಲೇಖನಲೋಲಾಸನ
ಮುಂದಿನ ಲೇಖನದೇಶದೆಲ್ಲೆಡೆ ಅಂಚೆ ಮತಗಳ ಎಣಿಕೆ ಆರಂಭ: ಬಿಜೆಪಿ ಅಭ್ಯರ್ಥಿಗಳಿಗೆ ಮುನ್ನಡೆ