ಮನೆ ಹಾಸ್ಯ ನಗೆಹನಿ

ನಗೆಹನಿ

0

ಆನಿವರ್ಸರಿ

ಗುಂಡನಿಗೆ ಮಡದಿ ಶೀಲಾ ಕೇಳಿದ್ಲು –

“ರೀ ಇವತ್ತು ನಮ್ಮ ಮದುವೆ ಆನಿರ್ವಸರಿ.. ಇದನ್ನು ಹೇಗೆ ಆಚರಿಸೋಣ..”

ಗಂಡ ಕೂಡಲೇ ಹೇಳಿದ, “ಎರಡು ತಾಸು ಮೌನಾಚರಣೆ ಮಾಡೋಣ..”

*****

ಹೇಗೆ?

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು –

ನಿನ್ನ ಗಂಡ ಹ್ಯಾಗೆ ಸತ್ತ…?

ಅದಕ್ಕೆ ಶೀಲಾ ಹೇಳಿದ್ದು –

ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು ಅನ್ನುತ್ತಿದ್ದರು. ಮೊನ್ನೆ ಸಂಜೆ ಸ್ವಲ್ಪ ಕುತ್ತಿಗೆ ನೋವಿದೆ ಅಂದರು…

*****

ಒದ್ದೆ

ಅದೊಂದು ಹುಚ್ಚಾಸ್ಪತ್ರೆ ಆ ಆಸ್ಪತ್ರೆಯ ಬಾವಿಗೆ ಬಿದ್ದ ಹುಚ್ಚನನ್ನು ಮತ್ತೊಬ್ಬ ಹುಚ್ಚ ಬಾವಿಗೆ ಹಾರಿ ಪ್ರಾಣ ಉಳಿಸಿದ್ದ. ಅದೇ ದಿನ ಸಂಜೆ ಆ ಹುಚ್ಚು ಪ್ಯಾನಿಗೆ ನೇಣು ಹಾಕಿಕೊಂಡು ತನ್ನ ಪ್ರಾಣ ಕಳೆದುಕೊಂಡ. ಹುಚ್ಚಾಸ್ಪತ್ರೆ ಡಾಕ್ಟ್ರು ಮತ್ತೊಬ್ಬ ಹುಚ್ಚನಿಗೆ – ನೀನು ಯೋಚನೆ ಮಾಡಬೇಡ.. ಅವನಿಗೆ ಬದುಕುವ ಯೋಗವಿಲ್ಲ

ಅದಕ್ಕೆ ಇವನು ಹೇಳಿದ –

ಸಾರ್ ಬಾವಿಗೆ ಬಿದ್ದು ಒದ್ದೆಯಾಗಿದ್ದನಲ್ಲ ಒಣಗಲೆಂದು ನಾನೇ ಫ್ಯಾನಿಗೆ ನೇತುಹಾಕಿದೆ.

ಹಿಂದಿನ ಲೇಖನಸುಮಲತಾ ವೇದಿಕೆ ಹತ್ತಿದ್ದಕ್ಕೆ ಆಕ್ರೋಶ: ಕೈಕೈ ಮಿಲಾಯಿಸಿ, ಕುರ್ಚಿಯಲ್ಲಿ ಬಡಿದಾಡಿಕೊಂಡ ಎರಡು ಗುಂಪುಗಳು
ಮುಂದಿನ ಲೇಖನಸಿಎಂ ಜೊತೆ ಚರ್ಚಿಸಿ ಸಾರಿಗೆ  ನೌಕರರ ಬೇಡಿಕೆ ಈಡೇರಿಸಲಾಗುವುದು: ಕೆಎಸ್‌’ಆರ್‌’ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ