ಆತ: ಎದುರಿಗೆ ಬರುತ್ತಿದ್ದವನನ್ನು ಮಾತಿಗೆ ಎಳೆದ “ನಮಸ್ಕಾರ ಸಾರ್ ಚೆನ್ನಾಗಿದ್ದೀರಾ?”
ಈತ: “ನಮಸ್ಯಾರ ಏನೋ ಹೀಗೆ ಇದ್ದೀನಿ. ಮನೆ ಹೋಗು ಅನ್ನುತ್ತೆ ಸ್ಮಶಾನ ಬಾ ಎನ್ನುತ್ತೆ. ಕಾಲ ತಳ್ತಾಯಿದ್ದೀನಿ”.
ಆತ: “ನನ್ನ ಗುರುತು ಸಿಕ್ಕಿತಾ ನಿಮಗೆ?”
ಈತ: “ಸಿಗದೆ ಏನಪ್ಪಾ?”
ಆತ: “ನಾನು ಯಾರು ಹೇಳಿ ನೋಡೋಣ?’
ಈತ: “ನೀನು ಇದರಲ್ಲಿ ಇದಾಗಿರಲಿಲ್ಲವೆ?’
ಆತ: “ಪರವಾಗಿಲ್ಲ ನಿಮ್ಮ ಜ್ಜಾಪಕಶಕ್ತಿ ಇನ್ನೂ ಚಿನ್ನಾಗಿಯೇ ಇದೆ!’
****
ಆತ ಅ ರಾತ್ರಿ ಚೆನ್ನಾಗಿ ಕುಡಿದು ದಾರಿಯಲ್ಲಿ ಮನೆಕಡೆಗೆ ಬರುತ್ತಲಿದ್ದ. ತೂರಾಡಿಕೊಂಡು ಬರುತ್ತಿದ್ದ ಅವನನ್ನು ನೋಡಿ ನಾಯಿಗಳು ಬೊಗಳಲು ಆರಂಭಿಸಿದವು. ಭಯಗೊಂಡವನು ಹತ್ತಿರವಿದ್ದ ಮನೆಯೊಂದರ ಬಾಗಿಲು ಬಡಿದ, ‘ಯಾರು?’ ಒಳಗಿನಿಂದ ಹೆಂಗಸು ಬಂದು ಬಾಗಿಲು ತೆಗೆದು ವಿಚಾರಿಸಿದಳು. ತೊದಲುತ್ತಾ “ಓಹ್ ನೀನಾ ಚಿನ್ನಾ ಎಷ್ಟೊಂದು ಸುಂದರವಾಗಿ ಕಾಣುತ್ತೀ” ಅಂದ ಅವಳಿಗೆ ಕೋಪ ನೆತ್ತಿಗೇರಿ ಬಾಗಿಲು ಬಳಿ ಇದ್ದ ಚಪ್ಪಲಿ ಹಿಡಿದು ಅವನಿಗೆ ನಾಲ್ಕು ಬಾರಿಸಿದಳು. ಒಳಗಿನಿಂದ ಪತಿರಾಯ ಇದನ್ನೆಲ್ಲಾ ಗಮನಿಸುತ್ತಾ “ಹಾಕು ಇನ್ನು ನಾಲ್ಕು ಚೆನ್ನಾಗಿ ಹಾಕು” ಅಂದ. “ಅದ್ಯಾಕೆ ಹಾಗೆ ಅಂತಾ ಇದ್ದೀರಿ?” ಕೇಳಿದಳು:
ಗಂಡ: “ನಾನು ಈಗತಾನೆ ಅವನ ಹೆಂಡ್ತಿ ಕೈಲಿ ಚೆನ್ನಾಗಿ ಥಳಿಸಿಕೊಂಡು ಬಂದಿದ್ದೇನೆ ಅದಕ್ಕೆ.” ಅಂದ ಅವಳು ಸುಸ್ತಾದಳು
****
ಮಗ ಪರೀಕ್ಷೆ ತಯಾರಿ ಮುಗಿಸಿ ಶಾಲೆಗೆ ಹೊರಟಿದ್ದ. ದೇವರ ಫೋಟೋ ಮೇಲೆ ಭಾರವಾದ ಕಲ್ಲೊಂದನ್ನು ಮಗ ಇಟ್ಟಿದ್ದನ್ನು ಕಂಡು ತಂದೆ ಕಂಡು ಕೇಳಿದರು
ತಂದೆ: “ಇದೇನಯ್ಯಾ ದೇವರ ಫೋಟೋ ಮೇಲೆ ಭಾರಿ ಕಲ್ಲನ್ನು ಇಟ್ಟಿದ್ದೀಯ? ಅದೇನೂಂತ ಹೇಳು”
ಮಗ: “ ನೀನೇ ಹೇಳಿದ್ದಯಲ್ಲಪ್ಪಾ ದೇವರ ಮೇಲೆ ಭಾರ ಹಾಕಿ ಪರೀಕ್ಷೆಗೆ ಹೋಗಿ ಬರೆದು ಬಾ ಎಂದು ಅದನ್ನೇ ನಾನು ಮಾಡಿರೋದು!”
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.