ಮನೆ ರಾಜ್ಯ ಉಪನ್ಯಾಸಕಿಗೆ ನೋಟಿಸ್, ನೀಡಿ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಕರಾಮುವಿ: ಕಾರಣವೇನು ಗೊತ್ತೆ ?

ಉಪನ್ಯಾಸಕಿಗೆ ನೋಟಿಸ್, ನೀಡಿ ಶಿಸ್ತುಕ್ರಮದ ಎಚ್ಚರಿಕೆ ನೀಡಿದ ಕರಾಮುವಿ: ಕಾರಣವೇನು ಗೊತ್ತೆ ?

0

ಮೈಸೂರು(Mysuru): ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ನೀಡಿದ ಆರೋಪದ ಮೇಲೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ನೋಟಿಸ್ ನೀಡಿದ್ದು, ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ಆರ್.ಹೇಮಲತಾ ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿವಿಯ ಎಲ್ಲ ಸಿಬ್ಬಂದಿ ಹಾಗೂ ನೌಕರರು ಹಾಜರಾತಿ ನೀಡಿದ್ದಾರೆ. ಆದರೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಈವರಗೆ ಹಾಜರಾತಿ ಪುಸ್ತಕ ನೀಡಿಲ್ಲ. ಬಯೋಮೆಟ್ರಿಕ್ ಇರುವ ಕಾರಣ ಹಾಜರಾತಿ ನೀಡಲ್ಲ ಎಂದು ಉಪನ್ಯಾಸಕಿ ಡಾ.ಹೇಮಲತಾ ತಿಳಿಸಿದ್ದಾರೆ ಎನ್ನಲಾಗಿದೆ.


ವಿವಿಯ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಕೆಎಸ್ ಓಯು ಶೈಕ್ಷಣಿಕ ಡೀನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.

ಹಿಂದಿನ ಲೇಖನರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವ: ಮೈಸೂರು ಯುವಕ ನಿರ್ಮಿಸಿ, ನಿರ್ದೇಶಿಸಿರುವ ಸಾಕ್ಷ್ಯಚಿತ್ರ ಆಯ್ಕೆ
ಮುಂದಿನ ಲೇಖನಕಬಿನಿ ಜಲಾಶಯ ಭರ್ತಿಗೆ ೫ ಅಡಿಯಷ್ಟೇ ಬಾಕಿ