ಮನೆ ಮನರಂಜನೆ ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಲೈಗರ್ ಸಿನಿಮಾ ತಂಡ

ಅಪ್ಪು ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಲೈಗರ್ ಸಿನಿಮಾ ತಂಡ

0

ಬೆಂಗಳೂರು (Bengaluru): ವಿಜಯ್ ದೇವರಕೊಂಡ ಅಭಿನಯದ ‘ಲೈಗರ್’ ಸಿನಿಮಾ ತೆರೆಗೆ ಬರಲಿದೆ. ಸಿನಿಮಾದ ಪ್ರಚಾರವನ್ನು ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ.
ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಬೆಂಗಳೂರಿಗೆ ಬಂದಿದೆ.
ಬೆಂಗಳೂರಿಗೆ ಬಂದ ‘ಲೈಗರ್’ ಸಿನಿಮಾ ತಂಡ ಡಾ.ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಚಿತ್ರತಂಡ ಪುನೀತ್ ಅವರ ಆಶೀರ್ವಾದ ಪಡೆದಿದ್ದಾರೆ.
ಲೈಗರ್’ ಸಿನಿಮಾ ಪ್ಯಾನ್ಇಂಡಿಯಾ ಸಿನಿಮಾ. ಹಾಗಾಗಿ ಕನ್ನಡದಲ್ಲೂ ಕೂಡ ಈ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಪ್ರೀ- ರಿಲೀಸ್ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಮಂತ್ರಿ ಮಾಲ್‌ನಲ್ಲಿ ‘ಲೈಗರ್’ ಪತ್ರಿಕಾಗೋಷ್ಠಿಯ ಬಳಿಕ ಪ್ರೀ- ರಿಲೀಸ್ ಕಾರ್ಯಕ್ರಮ ಜನರ ಸಮ್ಮುಖದಲ್ಲಿ ಮಾಡಲಾಗುತ್ತದೆ.
ಆಗಸ್ಟ್ 25ಕ್ಕೆ ‘ಲೈಗರ್’ ಸಿನಿಮಾ ವಿಶ್ವದಾದ್ಯಂತ ರಿಲೀಸಾಗುತ್ತಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನವಿದ್ದು, ಚಾರ್ಮಿ ಕೌರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಚಿತ್ರದ ಮೂಲಕ ಪ್ಯಾನ್‌ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಹೇಗೆ ಮಿಂಚಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

ಹಿಂದಿನ ಲೇಖನನ್ಯಾಯ, ನೀತಿ, ಧರ್ಮ ಹಾದಿಯಲ್ಲಿ ನಡೆಯಲು ದಾರಿ ಮಾಡಿಕೊಟ್ಟಂತಹ ಪರಮಾತ್ಮ ಶ್ರೀ ಕೃಷ್ಣ: ಎಲ್.ನಾಗೇಂದ್ರ
ಮುಂದಿನ ಲೇಖನಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಯೋಗದ ಅಧ್ಯಕ್ಷರ ಎಂ.ಶಿವಣ್ಣ ಮೈಸೂರು ಜಿಲ್ಲಾ ಪ್ರವಾಸ