ಹೊರಗಣ ಕತ್ತಲಿಗಿಂತ
ಒಳಗಣ ಕತ್ತಲು
ಬೆಳಕಿಗೆ ಬಲು ಕೇಡು.
ಅರಿವೆಯ ಬೆತ್ತಲೆಗಿಂತ
ಅರಿವಿನ ಬೆತ್ತಲೆ,
ಬದುಕಿಗೆ ನಾಚಿಕೆಗೇಡು.
ಬಣ್ಣಗಳಿಲ್ಲದ ಜಾಗದಲ್ಲಿ
ಸವೆಸಬಹುದು ಬದುಕು,
ಬೆಳಕಿಲ್ಲದ ಜಾಗದಲ್ಲಿ
ಬದುಕಲಾಗದು ಕ್ಷಣಕು.
ನಂಬಿಕೆಗಳಿಲ್ಲದ ಮನಸು
ಭಯಭೀತಿಗೆ ಕಾರಣ,
ಭರವಸೆಗಳಿಲ್ಲದ ಕನಸು
ಅಶಾಂತಿಗೆ ಪ್ರೇರಣ.
ಬೆಳಕು ಹಿಡಿದವರ
ಹೃನ್ಮನಗಳ ಒಳಗೆಲ್ಲಾ
ಹೊಂಗಿರಣ ಮಾಲೆ.
ಬೆಂಕಿ ಹಿಡಿದವರ
ಕಣಕಣಗಳ ತುಂಬೆಲ್ಲಾ
ಧಗಧಗಿಸುವ ಜ್ವಾಲೆ.
- ಎ.ಎನ್.ಆರ್
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.