ಮನೆ ರಾಜ್ಯ ಮುರುಘಾ ಮಠ ಪ್ರಕರಣ: ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಗೆ ಜಾಮೀನು ಮಂಜೂರು

ಮುರುಘಾ ಮಠ ಪ್ರಕರಣ: ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಗೆ ಜಾಮೀನು ಮಂಜೂರು

0

ಚಿತ್ರದುರ್ಗ (Chitradurga): ಅತ್ಯಾಚಾರ ಯತ್ನ, ಕಿರುಕುಳ, ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯರಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮುರುಘಾ ಮಠದ ಹಾಸ್ಟೆಲ್‌ ವಾರ್ಡನ್‌ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಬಸವರಾಜನ್‌ ದಂಪತಿ ಪರ ವಕೀಲ ರಾಮಚಂದ್ರ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ಅನಿತಾ ಕುಮಾರಿ ಅವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಹಿಂದಿನ ಲೇಖನಏಷ್ಯಾ ಕಪ್‌ ಟೂರ್ನಿ: ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ ರವೀಂದ್ರ ಜಡೇಜಾ  
ಮುಂದಿನ ಲೇಖನವೈವಾಹಿಕ ಸಂಬಂಧವನ್ನು ಯೂಸ್ ಅಂಡ್ ಥ್ರೋ ಸಂಸ್ಕೃತಿಯೆಂಬಂತೆ ಭಾವಿಸಿರುವ ಯುವ ಪೀಳಿಗೆ ನಡೆಗೆ ಕೇರಳ ಹೈಕೋರ್ಟ್‌ ಬೇಸರ